Advertisement

ಮಿಸ್ತ್ರಿ ಮುಂದುವರಿಕೆ ಆದೇಶಕ್ಕೆ ಸುಪ್ರೀಂ ತಡೆ

10:14 AM Jan 11, 2020 | Hari Prasad |

ಹೊಸದಿಲ್ಲಿ: ಟಾಟಾ ಗ್ರೂಪ್‌ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೈರಸ್‌ ಮಿಸ್ತ್ರಿ ಮುಂದುವರಿಯುವಂತೆ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌ಎಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

Advertisement

ಎನ್‌ಸಿಎಲ್‌ಎಟಿ ಆದೇಶವನ್ನು ಪ್ರಶ್ನಿಸಿ ಟಾಟಾ ಗ್ರೂಪ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ಪೀಠವು, ಈ ತೀರ್ಪು ಕನಿಷ್ಠ ಸಾಮಾನ್ಯ ದೋಷದಿಂದ ಕೂಡಿದೆ. ನಾವು ಈ ಬಗ್ಗೆ ವಿವರಗಳನ್ನು ತಿಳಿಯಬೇಕಾಗಿದೆ ಎಂದು ತಿಳಿಸಿದೆ. ಜತೆಗೆ ಮಿಸ್ತ್ರಿ ಮತ್ತಿತರರಿಗೆ ನೋಟಿಸ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next