Advertisement

ಬಾಕಿ ಇಟ್ಟ ಡೀಸೆಲ್‌ ಸಬ್ಸಿಡಿ ಬಿಡುಗಡೆಗೊಳಿಸಿ

03:45 AM Feb 10, 2017 | |

ಉಡುಪಿ: ರಾಜ್ಯ ಸರಕಾರ ಕಳೆದ ಸಾಲಿನ ಬಜೆಟ್‌ನಲ್ಲಿ 105 ಕೋಟಿ ರೂ. ಡೀಸೆಲ್‌ ಮೇಲೆ ಸಬ್ಸಿಡಿ ಮೀಸಲಿಟ್ಟಿದ್ದರೂ ಕೂಡ ಕಳೆದ 4 ತಿಂಗಳಿಂದ ಮೀನುಗಾರರಿಗೆ ಯಾವುದೇ ಡೀಸೆಲ್‌ ಸಬ್ಸಿಡಿ ಬಿಡುಗಡೆಯಾಗಿಲ್ಲ.. ಈಗಾಗಲೇ ಬಾಕಿ ಇಟ್ಟಿರುವ ಸಬ್ಸಿಡಿ ಹಣವನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕೆಂದು ಉಡುಪಿ ಮತ್ತು ದ.ಕ. ಜಿಲ್ಲಾ ಬಿಜೆಪಿ ಮೀನುಗಾರರ ಪ್ರಕೋಷ್ಠ ಆಗ್ರಹಿಸಿದೆ.

Advertisement

ಕರಾವಳಿ ಭಾಗದಲ್ಲಿ ಸುಮಾರು 5,000 ಯಾಂತ್ರೀಕೃತ ಬೋಟುಗಳು, ಸುಮಾರು 3 ಲಕ್ಷಕ್ಕೂ ಅಧಿಕ ಜನರು ಮೀನುಗಾರಿಕೆಯನ್ನು ಮೂಲ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಈ ಭಾಗದ ಮೀನುಗಾರರ ಕುಟುಂಬಕ್ಕೆ ಸೇರಿದವರೇ ಸಚಿವರಾಗಿದ್ದರೂ ಕೂಡ ಮೀನುಗಾರರು ಎದುರಿಸುತ್ತಿರುವ ಯಾವುದೇ ಸಮಸ್ಯೆಗೆ ಸ್ಪಂದನೆ ನೀಡದಿರುವುದು ತೀರಾ ಖಂಡನೀಯ. 

ಪ್ರಸ್ತುತ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಸಂಪೂರ್ಣ ಕುಂಠಿತಗೊಂಡಿದ್ದು ಈಗಾಗಲೇ ಹಲವಾರು ಸಮಸ್ಯೆಗಳನ್ನು ಮೀನುಗಾರರು ಎದುರಿಸುತ್ತಿದ್ದಾರೆ. ಮಹಿಳಾ ಮೀನುಗಾರರಿಗೆ ಶೇ. 2ರ ಬಡ್ಡಿ ದರದಲ್ಲಿ ನೀಡಲಾಗಿದ್ದ ಸಾಲದ ವ್ಯತ್ಯಾಸದ ಬಡ್ಡಿ ಮೊತ್ತವನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿದೆ.

ಬೀಗ ಜಡಿದು ಪ್ರತಿಭಟನೆ
ಮುಂದಿನ 15 ದಿನಗಳಲ್ಲಿ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಮೀನುಗಾರಿಕಾ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಪ್ರಮುಖರಾದ  ಸದಾನಂದ ಬಳ್ಕೂರು, ಶೋಭೇಂದ್ರ ಸಸಿಹಿತ್ಲು, ರಾಘವೇಂದ್ರ ಕಾಂಚನ್‌, ಶಶಿಕಾಂತ್‌ ಪಡುಬಿದ್ರಿ, ವಿಜಯ ಕುಂದರ್‌, ವಿಜಯ ಕರ್ಕೇರ, ಸುರೇಂದ್ರ ಖಾರ್ವಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next