Advertisement

Chitradurga: ಮುರುಘಾ ಶರಣರ ಬಿಡುಗಡೆ: ತನಿಖೆಗೆ ಸೂಚನೆ

11:07 PM Nov 18, 2023 | Team Udayavani |

ಚಿತ್ರದುರ್ಗ: ಇನ್ನೊಂದೆಡೆ ಎರಡನೇ ಪೋಕೊÕà ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಜಿಲ್ಲಾ ಕಾರಾಗೃಹದಿಂದ ಮುರುಘಾ ಶರಣರ ಬಿಡುಗಡೆ ಮಾಡಿರುವ ಕ್ರಮದ ಕುರಿತು ತನಿಖೆ ನಡೆಸಲು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಬಂದೀಖಾನೆ ಎಡಿಜಿಪಿಗೆ ನಿರ್ದೇಶನ ನೀಡಿದೆ.

Advertisement

ಈ ಪ್ರಕರಣದ ಬಾಡಿ ವಾರೆಂಟ್‌ ಕುರಿತ ಅರ್ಜಿ ವಿಚಾರಣೆಯನ್ನು ಶನಿವಾರ ಕೈಗೆತ್ತಿಕೊಂಡ ನ್ಯಾಯಾ ಧೀಶರಾದ ಬಿ.ಕೆ. ಕೋಮಲಾ ಈ ಆದೇಶ ಮಾಡಿದ್ದಾರೆ ಎಂದು ವಿಶೇಷ ಸರಕಾರಿ ವಕೀಲರಾದ ಎಚ್‌.ಆರ್‌. ಜಗದೀಶ್‌ ತಿಳಿಸಿದ್ದಾರೆ.

ಶರಣರ ವಿರುದ್ಧ ಹೊರಡಿಸಿದ್ದ ಬಾಡಿ ವಾರೆಂಟ್‌ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತಿಸುವಂತೆ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋರ್ಟ್‌ ನ.16ರಂದು ಬೆಳಗ್ಗೆ 11ಕ್ಕೆ ಕೈಗೆತ್ತಿಕೊಂಡಿತ್ತು. ಪ್ರಕರಣದ ಆರೋಪಿ ಗಳಾದ ಶಿವಮೂರ್ತಿ ಮುರುಘಾ ಶರಣರು ಹಾಗೂ ವಾರ್ಡನ್‌ ರಶ್ಮಿ ಜಿಲ್ಲಾ ಕಾರಾಗೃಹದಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ನಡುವೆ ಮೊದಲ ಪೋಕ್ಸೋ ಪ್ರಕರಣಕ್ಕೆ ಹೈಕೋರ್ಟ್‌ ನೀಡಿದ್ದ ಜಾಮೀನಿನ ಅನುಸಾರ ಶರಣರನ್ನು ಬಿಡುಗಡೆ ಮಾಡಲಾಗಿತ್ತು.

ಮಧ್ಯಾಹ್ನ ವಿಚಾರಣೆ ಆರಂಭ ವಾದಾಗ ರಶ್ಮಿ ಮಾತ್ರ ಕಾರಾಗೃಹದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದರು. ಶರಣರನ್ನು ಹೈಕೋರ್ಟ್‌ ನೀಡಿರುವ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಿರುವು ದಾಗಿ ಕಾರಾಗೃಹದ ಅ ಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next