Advertisement

ಹಳೆಯಂಗಡಿ: ಮೀನು ಮಾರುಕಟ್ಟೆ ನವೀಕರಣಕ್ಕೆ ಸಚಿವರಿಗೆ ಮನವಿ

09:41 PM Sep 18, 2019 | mahesh |

ಹಳೆಯಂಗಡಿ: ಪಟ್ಟಣವಾಗಿ ಬೆಳೆಯುತ್ತಿರುವ ಹಳೆಯಂಗಡಿಯ ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ನವೀಕರಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿಯವರಲ್ಲಿ ದ.ಕ. ಜಿ. ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಸಚಿವರು ಕಾರ್ಯ ನಿಮಿತ್ತ ಮಂಗ ಳೂರಿಗೆ ತೆರಳುತ್ತಿದ್ದಾಗ ಹಳೆಯಂ ಗಡಿಯ ಪೇಟೆಯಲ್ಲಿ ವಿವಿಧ ಸಂಘ - ಸಂಸ್ಥೆಗಳ ಪ್ರಮುಖರೊಂದಿಗೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ಜಿ.ಪಂ. ಸದಸ್ಯರು ಮನವಿ ನೀಡಿದರು.

ಬಹಳ ವರ್ಷ ಗಳಿಂದ ದುಸ್ಥಿತಿಯಲ್ಲಿ ಇರುವ ಮೀನು ಮಾರುಕಟ್ಟೆಯನ್ನು ಸಂಪೂರ್ಣವಾಗಿ ನವೀಕರಿಸಿ, ಮಾರುಕಟ್ಟೆ ಸಹಿತ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಅವಕಾಶವಿದ್ದು, ಇದರಿಂದ ಮೀನುಗಾರರ ಹಾಗೂ ಗ್ರಾಹಕರ ಸಂಪರ್ಕ ಹೆಚ್ಚುತ್ತದೆ. ಮೂಲ್ಕಿಯಿಂದ ಹಳೆಯಂಗಡಿ ವ್ಯಾಪ್ತಿಯಲ್ಲಿರುವ ಎಲ್ಲ ಮೀನುಗಾರಿಕೆ ರಸ್ತೆಯನ್ನು ಮೀನುಗಾರಿಕೆ ಇಲಾಖೆಯಿಂದ ಅಭಿವೃದ್ಧಿಪಡಿಸುವ ಬಗ್ಗೆ ಮನವಿಯಲ್ಲಿ ಉಲ್ಲೇಖೀಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಬುಧವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ವಿನೋದ್‌ ಕುಮಾರ್‌ ಕೊಳು ವೈಲು, ಎಚ್‌. ರಾಮಚಂದ್ರ ಶೆಣೈ, ಮೋಹನ್‌ ಅಮೀನ್‌, ಯೋಗೀಶ್‌ ಪಾವಂಜೆ, ದಾಮೋದರ ಗೊಳಿದಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next