Advertisement

ವಾಹನ ತೆರಿಗೆ ಪಾವತಿಸಲು ಜೂನ್ ವರೆಗೆ ಕಾಲಾವಕಾಶ: ಡಿಸಿಎಂ ಲಕ್ಷ್ಮಣ ಸವದಿ

09:06 AM Apr 03, 2020 | keerthan |

ಬೆಂಗಳೂರು: ಕೋವಿಡ್-19 ಸೋಂಕಿನ ಹಿನ್ನಲೆ ಲಾಕ್ ಡೌನ್ ಇರುವುದರ ಪರಿಣಾಮ ರಾಜ್ಯದಲ್ಲಿ ವಾಹನ ತೆರಿಗೆ ಪಾವತಿಸಲು ಕಾಲಾವಕಾಶ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕಷ್ಮಣ ಸವದಿ ಹೇಳಿದ್ದಾರೆ.

Advertisement

ಕರ್ನಾಟಕ ರಾಜ್ಯವನ್ನು ಸಂಪೂರ್ಣವಾಗಿ ಲಾಕ್ ಡೌನ್  ಮಾಡಿರುವುದರಿಂದ,  ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ  ಕಲಂ  4(1)ರ ನಿಯಮಗಳನ್ನು ಸಡಿಲಗೊಳಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಲಾಗುವುದು. ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ  ಎಪ್ರಿಲ್ 15  ಮತ್ತು ಮೇ 15 ಒಳಗಾಗಿ ಪಾವತಿಸಬೇಕಾಗಿದ್ದ ವಾಹನ ತೆರಿಗೆಯನ್ನು ದಂಡ  ರಹಿತವಾಗಿ ಪಾವತಿಸಲು ಜೂನ್ ಒಂದರವರೆಗೆ ಅವಕಾಶ ನೀಡಿ ಸಚಿವರ ಲಕ್ಷ್ಮಣ ಸವದಿಯವರು ಆದೇಶ ಹೊರಡಿಸಿದ್ದಾರೆ.

ರಾಜ್ಯದ  ವಾಹನ  ಮಾಲೀಕರು ಇದನ್ನು  ಸದುಪಯೋಗ ಪಡೆಸಿಕೊಂಡು ಲಾಕ್ ಡೌನ್  ಅನ್ನು  ಯಶಸ್ವಿಗೊಳಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next