Advertisement

“ಕಾಡಿನ ಮಕ್ಕಳಿಗೆ ಕಾಡಿನ ಬಳಿಯೇ ಪುನರ್ವಸತಿ’

11:21 PM Sep 13, 2019 | Sriram |

ಮಡಿಕೇರಿ: ಅರಣ್ಯವಾಸಿ ಬುಡಕಟ್ಟು ಜನಾಂಗದವರನ್ನು ಸ್ಥಳಾಂತರಿಸುವುದು ಅನಿವಾರ್ಯವಾದರೆ ಅವರಿಗೆ ಸನಿಹದಲ್ಲೇ ಪುನರ್‌ ವಸತಿ ಕಲ್ಪಿಸಿದರೆ ಅವರು ತಮ್ಮ ವಿಶಿಷ್ಟ ಗುರುತಿಸುವಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್‌ ಸಿ.ಜಿ.ಕುಶಾಲಪ್ಪ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ರಾಜ್ಯ ಅರಣ್ಯ ಬುಡಕಟ್ಟು ವಿದ್ಯಾರ್ಥಿ ಯುವ ಸಂಘಟನೆಯ ಸಹಯೋಗದಲ್ಲಿ ಟಾಟಾ ಸ್ಟೀಲ್ಸ್‌ನ ಸಿಎಸ್‌ಆರ್‌ ವಿಭಾಗ ಅರಣ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಮಟ್ಟದ ಬುಡಕಟ್ಟು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬುಡಕಟ್ಟು ಜನರು ಅರಣ್ಯವನ್ನು ತೊರೆಯಲು ಬಯಸುತ್ತಾರೋ ಅಥವಾ ಅಲ್ಲೇ ಮುಂದುವರಿಯಲು ಬಯಸುತ್ತಾರೋ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಟಾಟಾ ಸ್ಟೀಲ್ಸ್‌ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಮುಖ್ಯಸ್ಥ ಸೌರವ್‌ ರಾಯ್‌ ಬುಡಕಟ್ಟು ಜನಾಂಗ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು. ದೇಶದ ಬುಡಕಟ್ಟು ಜನಾಂಗದ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳುವುದೇ ಈ ಸಂವಾದದ ಉದ್ದೇಶ ಎಂದರು. ಟಾಟಾ ಸಮೂಹದ ಕಂಪನಿಗಳ ಸಹಭಾಗಿತ್ವದ ಬಗ್ಗೆ ತಾಜ್‌ ಮಡಿಕೇರಿ ರೆಸಾರ್ಟ್ಸ್ ಮತ್ತು ಸ್ಪಾದ ಮುಖ್ಯಸ್ಥ ಜೋಸ್‌ ಅವರು ವಿಶೇಷ ಸಂವಾದ ನಡೆಸಿಕೊಟ್ಟರು. ಬುಡಕಟ್ಟು ಜನಾಂಗಗಳ ಖಾದ್ಯ ವೈವಿಧ್ಯವನ್ನು ವಿಸ್ತತವಾಗಿ ಅಧ್ಯಯನ ಮಾಡಿದ ಬಳಿಕ ವಿಶಿಷ್ಟ ಊಟದ ಅನುಭವಗಳನ್ನು ಅವರು ಹಂಚಿಕೊಂಡರು.

ಹಣಕಾಸು ಕೊರತೆಯಿಂದಾಗಿ ಶಿಕ್ಷಣ ಪೂರ್ಣಗೊಳಿಸಲು ಸಾಹಸ ಮಾಡಿದ ಕರ್ನಾಟಕದ ಕುಡಿಯ ಸಮುದಾಯ ಮುತ್ತಪ್ಪ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಕುಡಿಯ ಸಮುದಾಯದ ಗೋಪಮ್ಮ, ಬುಡಕಟ್ಟು ಸಮುದಾಯಗಳ ನಡುವೆಯೇ ಸಂಪರ್ಕ ಬೆಸೆಯುತ್ತಿರುವ ತಮ್ಮ ಸಾಧನೆಯ ವಿವರ ಬಿಚ್ಚಿಟ್ಟರು.ಸಂವಾದ ಸರಣಿಯ ಮುಂದಿನ ಕಾರ್ಯಕ್ರಮಗಳು ಒಡಿಶಾದ ಕಾಳಹಂದಿ, ಅರುಣಾಚಲ ಪ್ರದೇಶದ ಇಟಾನಗರ, ಮಧ್ಯಪ್ರದೇಶದ ಜಬೂವಾ, ಮಹಾರಾಷ್ಟ್ರಗಳಲ್ಲಿ ನಡೆಯಲಿವೆ ಎಂದು ಆಯೋಜಕರು ತಿಳಿಸಿದರು

Advertisement

78 ಪ್ರತಿನಿಧಿಗಳು
ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಕರ್ನಾಟಕದ 19 ಬುಡಕಟ್ಟು ಜನಾಂಗಗಳ 78 ಪ್ರತಿನಿಧಿಗಳು ಪಾಲ್ಗೊಂಡಿದ್ದ ಎರಡು ದಿನಗಳ ಈ ವಿಶಿಷ್ಟ ಸಂವಾದದಲ್ಲಿ ಮೊದಲ ದಿನ ಬುಡಕಟ್ಟು ಜನಾಂಗಗಳ ಐಡೆಂಟಿಟಿ ಸಮಸ್ಯೆ, ನಿರುದ್ಯೋಗ ಮತ್ತು ಆರೋಗ್ಯ ವಿಷಯಗಳ ಬಗ್ಗೆ ಗುಂಪು ಚರ್ಚೆ ನಡೆಯಿತು.

ಎರಡನೇ ದಿನದ ಸಂವಾದದಲ್ಲಿ ಭಾರತದ ಮೊಟ್ಟಮೊದಲ ಬುಡಕಟ್ಟು ಮಹಿಳಾ ಪೈಲಟ್‌ ಎನಿಸಿದ ಅಜ್ಮಿàರಾ ಬಾಬಿ ಪಾಲ್ಗೊಂಡಿದ್ದರು.ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದ ಬುಡಕಟ್ಟು ವ್ಯಕ್ತಿಗಳ ಯಶೋಗಾಥೆಗಳ ಬಗ್ಗೆ ಕೂಡಾ ವಿಚಾರ ವಿನಿಮಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next