Advertisement

ನೋಂದಣಿ ಅವಧಿ ವಿಸ್ತರಣೆ

06:00 AM Dec 18, 2018 | Team Udayavani |

ವಿಧಾನಸಭೆ: ರೈತರಿಂದ ಈರುಳ್ಳಿ ಖರೀದಿಸಲು ಅನುಕೂಲವಾಗುವಂತೆ ಸರಕಾರ ನೋಂದಣಿ ಪ್ರಕ್ರಿಯೆ ಅವಧಿಯನ್ನು ವಿಸ್ತರಣೆ ಮಾಡಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು. ಮಂಗಳವಾರ ವಿಧಾನಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಖರೀದಿ ನೋಂದಣಿಯನ್ನು 2019ರ ಜನವರಿ 1 ರವರೆಗೆ ವಿಸ್ತರಿಸಲಾಗಿದೆ ಎಂದರು.
ರಾಜ್ಯ ಸರಕಾರದ ಬೆಲೆ ಕೊರತೆ ಪಾವತಿ ಯೋಜನೆಯ ಅನುಷ್ಠಾನ ಅವಧಿಯು ನ.28 ರಿಂದ ಡಿ.17ರವರೆಗೆ ಮಾತ್ರ ಜಾರಿಯಲ್ಲಿತ್ತು. ರೈತರ ಹಿತದೃಷ್ಟಿಯಿಂದ ಈ ಯೋಜನೆಯ ಅನುಷ್ಠಾನಾವಧಿಯನ್ನು ಮುಂದಿನ 15 ದಿನಗಳವರೆಗೆ ಅಂದರೆ ಜನವರಿ 1 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.

Advertisement

ಇದಲ್ಲದೆ ಕಳೆದ ನವೆಂಬರ್‌ದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಿದಂತೆ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಉತ್ಪನ್ನಕ್ಕೆ ಬೆಂಬಲ ಬೆಲೆನಿಗದಿ ಪಡಿಸಿ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ವಾದ ಈರುಳ್ಳಿ ಉತ್ಪನ್ನ ಧಾರಣೆಗೆ 
ವ್ಯತ್ಯಾಸದ ಮೊತ್ತವನ್ನು ಪ್ರೋತ್ಸಾಹ ಧನವಾಗಿ ರೈತರಿಗೆ ಪಾವತಿಸಲು ಷರತ್ತುಗಳನ್ನೊಳಗೊಂಡಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next