ರಾಜ್ಯ ಸರಕಾರದ ಬೆಲೆ ಕೊರತೆ ಪಾವತಿ ಯೋಜನೆಯ ಅನುಷ್ಠಾನ ಅವಧಿಯು ನ.28 ರಿಂದ ಡಿ.17ರವರೆಗೆ ಮಾತ್ರ ಜಾರಿಯಲ್ಲಿತ್ತು. ರೈತರ ಹಿತದೃಷ್ಟಿಯಿಂದ ಈ ಯೋಜನೆಯ ಅನುಷ್ಠಾನಾವಧಿಯನ್ನು ಮುಂದಿನ 15 ದಿನಗಳವರೆಗೆ ಅಂದರೆ ಜನವರಿ 1 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
Advertisement
ಇದಲ್ಲದೆ ಕಳೆದ ನವೆಂಬರ್ದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಿದಂತೆ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಉತ್ಪನ್ನಕ್ಕೆ ಬೆಂಬಲ ಬೆಲೆನಿಗದಿ ಪಡಿಸಿ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ವಾದ ಈರುಳ್ಳಿ ಉತ್ಪನ್ನ ಧಾರಣೆಗೆ ವ್ಯತ್ಯಾಸದ ಮೊತ್ತವನ್ನು ಪ್ರೋತ್ಸಾಹ ಧನವಾಗಿ ರೈತರಿಗೆ ಪಾವತಿಸಲು ಷರತ್ತುಗಳನ್ನೊಳಗೊಂಡಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.