Advertisement
ದಿನಕ್ಕೆ ನಾಲ್ಕು ತಾಸು ನೀರು ಹಾಯಿಸುವ ತೋಟಗಳಲ್ಲೂ ಹಿಂಗಾರ ಸುಟ್ಟು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. 36-37 ಡಿಗ್ರಿ ಸೆ.ಗಿಂತ ಹೆಚ್ಚಿನ ತಾಪಮಾನವಿದ್ದರೆ ಅಡಿಕೆ ಇಳುವರಿ ಕುಸಿಯುತ್ತದೆ. ಅದಕ್ಕಿಂತ ಹೆಚ್ಚು ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ವರ್ಷದ ಇಳುವರಿಯೂ ಕುಸಿಯುವುದು ನಿಶ್ಚಿತ.
ಕಳೆದ ವರ್ಷ ಮಳೆ ಪ್ರಮಾಣ ಹೆಚ್ಚಿದ್ದ ರಿಂದ ಜಿಲ್ಲೆಯ 33,595 ಹೆಕ್ಟೇರ್ ಪ್ರದೇಶದಲ್ಲಿ ಶೇ. 33ಕ್ಕಿಂತ ಹೆಚ್ಚು (ಫೈಟೋಥೆರಾ ಆರೆಕಿಯಾ) ಕೊಳೆಯನ್ನು ಗುರುತಿ ಸಲಾಗಿತ್ತು. ಜತೆಗೆ ಮೇಯಲ್ಲಿ ಅಡಿಕೆ ಸಸಿಯನ್ನು ಬಾಧಿಸುವ ರೆಡ್ಮೈಟ್ (ಫಂಗಸ್ನಿಂದ ಸೋಗೆ ಕೆಂಪಾಗುವುದು) ರೋಗ ಈ ಬಾರಿ ಕೆಲವೆಡೆ ಮಾರ್ಚ್ನಲ್ಲೇ ಆವರಿಸಿದೆ. ಇದು ಅಡಿಕೆಯನ್ನೇ ನಂಬಿರುವ ಬೆಳೆಗಾರರಿಗೆ ಹೊಡೆತ ನೀಡಿದೆ.
Related Articles
Advertisement
ಅಡಿಕೆಯ 3ನೇ ಕೊಯ್ಲು ಆಗಿದೆ. ಮಳೆಗಾಲಕ್ಕೆ ಮುನ್ನ ಮದ್ದು ಸಿಂಪಡನೆ ಮಾಡಬೇಕಿತ್ತು. ಆದರೆ ತಾಪಮಾನ ಏರಿಕೆಯಿಂದ ಹಿಂಗಾರ ಕರಟಿ ಮುಂದಿನ ವರ್ಷದ ಇಳುವರಿಗೆ ಹೊಡೆತ ಬೀಳಬಹುದು ಎಂಬುದು ಕೃಷಿ ತಜ್ಞರ ಅಭಿಪ್ರಾಯ.
ಇಲಾಖೆಯಿಂದ ಮಾಹಿತಿತಾಪಮಾನ 37 ಡಿಗ್ರಿ ಸೆ.ಗಿಂತ ಹೆಚ್ಚಾದಲ್ಲಿ ಅಡಿಕೆ ಹಿಂಗಾರ ಹಾಗೂ ಸಿರಿ ಒಣಗುತ್ತದೆ. ಕೊಳೆ ರೋಗ ಮತ್ತು ರೆಡ್ಮೈಟ್ಗೆ ಡೈಕೋಫಾಲ್, ಬೇರುಹುಳು ಸಮಸ್ಯೆ ಕಂಡುಬಂದಲ್ಲಿ ರೋಗ ನಿಯಂತ್ರಣಕ್ಕೆ ದುಂಬಿಗಳನ್ನು ಆಕರ್ಷಿಸುವ ಬಲೆಗಳು, ತೋಟದ ಮಧ್ಯೆ ಬೆಂಕಿ ಹಾಕಿ ಹುಳಗಳ ನಾಶ, ಬುಡಕ್ಕೆ ಸುಣ್ಣ ಸಿಂಪಡಣೆಯಿಂದ ನಿಯಂತ್ರಣ ಸಾಧ್ಯ.
– ಎಚ್.ಆರ್. ನಾಯಕ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ದ.ಕ. ಹಳದಿ ರೋಗದಿಂದ ಸ್ವಲ್ಪಮಟ್ಟಿಗೆ ಸಮಸ್ಯೆ ನಿವಾರಣೆ ಕಂಡುಕೊಳ್ಳುವ ಸಮಯದಲ್ಲಿ ಬಿಸಿಲು ಹೆಚ್ಚಾದ ಪರಿಣಾಮ ಹಿಂಗಾರವೇ ಕರಟಿ ಬೀಳುತ್ತಿದೆ. ಇದಕ್ಕೆ ಯಾವುದೇ ಮದ್ದು ಇಲ್ಲ. ನೀರಿದ್ದರೂ ಬೆಳೆ ಉಳಿಸಿಕೊಳ್ಳಲಾಗದ ಪರಿಸ್ಥಿತಿ ಬಂದೊಗಿದೆ.
– ಸುಬ್ರಹ್ಮಣ್ಯ ಭಟ್, ಕೃಷಿಕ, ಸುಳ್ಯ ಬಂಟ್ವಾಳ ವ್ಯಾಪ್ತಿಯಲ್ಲಿ ಬೇರುಹುಳು ಸಮಸ್ಯೆ ಹೆಚ್ಚಾಗಿದೆ. ಹಿಂಗಾರವೂ ಕರಟಿದ್ದು, ನಮ್ಮ ಎರಡು ಎಕರೆ ತೋಟದಲ್ಲಿ 100ಕ್ಕೂ ಹೆಚ್ಚು ಗಿಡಗಳಿಗೆ ಕೊಳೆ ರೋಗ, ಬೇರುಹುಳು ಆವರಿಸಿದೆ. ಇನ್ನೆರಡು ತಿಂಗಳಲ್ಲಿ ಮಳೆ ಆರಂಭವಾದಾಗ ಎಲ್ಲ ಮರ ನೆಲಕ್ಕುರುಳುವ ಆತಂಕದಲ್ಲಿದ್ದೇವೆ.
– ಈಶ್ವರ ಭಟ್, ಕೃಷಿಕ, ಪುಣಚ – ಚೈತ್ರೇಶ್ ಇಳಂತಿಲ