Advertisement

ಪ್ರಚಾರಕ್ಕೆ ರೆಡ್ಡಿ ಸಹಾಯ ಪಡೀತೇವೆ

06:40 AM May 03, 2018 | |

ಶಿವಮೊಗ್ಗ: “ಬಳ್ಳಾರಿ ಜಿಲ್ಲೆ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪಕ್ಷ ಗೆಲ್ಲುವ ಸಾಧ್ಯತೆ ಇದೆ. ಇದಕ್ಕಾಗಿ ಸಂಸದರಾಗಿರುವ ಶ್ರೀರಾಮುಲು ಅವರನ್ನು ಬಾದಾಮಿ ಕ್ಷೇತ್ರದಲ್ಲಿ ನಿಲ್ಲಿಸಲಾಗಿದೆ. ಜೊತೆಗೆ, ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಸಹಾಯ ಪಡೆದುಕೊಳ್ಳ ಲಾಗುವುದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಶಿವಮೊಗ್ಗ ಪ್ರಸ್‌ ಟ್ರಸ್ಟ್‌ ವತಿಯಿಂದ ಆಯೋಜಿ ಸಲಾಗಿದ್ದ ಸಂವಾದ ಮತ್ತು ಹೊಳಲೂರಿನ ಕಾರ್ಯ ಕ್ರಮದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, “ಜನಾರ್ದನ ರೆಡ್ಡಿಗೆ ಪಕ್ಷದಿಂದ ಟಿಕೆಟ್‌ ನೀಡಲಾಗಿಲ್ಲ. ಬಹಿರಂಗ ಪ್ರಚಾರಕ್ಕೂ ಅವರನ್ನು ಯಾವ ಕ್ಷೇತ್ರಕ್ಕೂ ಕರೆ ಯುತ್ತಿಲ್ಲ. ಆದರೆ, ಅವರೇ ಸಹಾಯ ಮಾಡುವೆ ಎಂದಿದ್ದಾರೆ. ಹೀಗಾಗಿ, ಬಳ್ಳಾರಿ ಹಾಗೂ ಸುತ್ತ ಮುತ್ತಲಿನ ಕ್ಷೇತ್ರಗಳಲ್ಲಿ ಅವರ ಸಹಕಾರ ಪಡೆಯಲಾಗುವುದು’ ಎಂದರು.

ಜನಾರ್ದನ ರೆಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ, ನಮಗೂ ಅವರಿಗೂ ಸಂಬಂಧವಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್‌ ಹೇಳಿದ್ದಾರೆ. ಆದರೆ, ಜನಾರ್ದನ ರೆಡ್ಡಿ ಯವರೇ ನಮಗೆ ಬೆಂಬಲ ನೀಡುತ್ತೇವೆ, ಸಹಕರಿ ಸುತ್ತೇನೆ ಎಂದು ಹೇಳಿದಾಗ ಬೇಡ ಎನ್ನಲಾ ಗುತ್ತದೆಯೇ? ಇದನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ಸ್ಪಷ್ಟಪಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next