Advertisement

ತಮಿಳುನಾಡಿನಲ್ಲಿ ನಿತ್ಯ 4 ಸಾವಿರ “ಕೆಂಗಣ್ಣು’ಪ್ರಕರಣ ದೃಢ

09:38 PM Nov 22, 2022 | Team Udayavani |

ಚೆನ್ನೈ: ಕರ್ನಾಟಕದ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಈಚೆಗೆ ಪ್ರತಿ ದಿನ 4 ಸಾವಿರ ಕೆಂಗಣ್ಣು (ಮದ್ರಾಸ್‌ ಐ) ಪ್ರಕರಣಗಳು ದೃಢಪಡುತ್ತಿವೆ.

Advertisement

ಆ ರಾಜ್ಯದಲ್ಲಿ ಮುಂಗಾರು ಪ್ರಕೋಪ ಶುರುವಾಗಿರುವಂತೆಯೇ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ತಮಿಳುನಾಡು ರಾಜಧಾನಿ ಚೆನ್ನೈ ಒಂದರಲ್ಲಿಯೇ ಪ್ರತಿ ದಿನ ಕನಿಷ್ಠ 80ರಿಂದ 100 ಮಂದಿ ಕೆಂಗಣ್ಣು ಸಮಸ್ಯೆಗೆ ಒಳಗಾಗಿ, ಆಸ್ಪತ್ರೆಗಳಿಗೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಆರೋಗ್ಯ ಇಲಾಖೆ ಕಣ್ಣಿನ ಸುರಕ್ಷತೆಯ ಬಗ್ಗೆ ಸುತ್ತೋಲೆ ಹೊರಡಿಸಿದೆ. ಜತೆಗೆ ಸಮಸ್ಯೆಗೆ ತುತ್ತಾದವರು ಪ್ರತ್ಯೇಕವಾಗಿ ಇರಬೇಕು ಎಂದು ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next