Advertisement

ರೆಡ್‌ಕ್ರಾಸ್‌ ಸಂಸ್ಥೆಯಿಂದ ಬಡವರಿಗೆ ದಿನಸಿ ಕಿಟ್‌ ವಿತರಣೆ

06:19 AM May 30, 2020 | Suhan S |

ಶಿರಹಟ್ಟಿ: ಕೋವಿಡ್ ಭೀತಿಯಿಂದ ಸಾಕಷ್ಟು ತೊಂದರೆಯಲ್ಲಿರುವ ಬಡವರಿಗೆ ಗದಗ ರೆಡ್‌ಕ್ರಾಸ್‌ ಸಂಸ್ಥೆಯಿಂದ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

Advertisement

ಕಿಟ್‌ ವಿತರಿಸಿ ಮಾತನಾಡಿದ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಪ್ರತಿ ಗ್ರಾಮ ಹಾಗೂ ಪಟ್ಟಣದಲ್ಲಿ ಕೋವಿಡ್ ದಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತೆ ಆಗಿದೆ. ಇಂತಹ ಸಂದರ್ಭದಲ್ಲಿ ಬಡವರ ನೆರೆವಿಗೆ ಧಾವಿಸುವುದು ಅತ್ಯಂತ ಮಾನವೀಯತೆಯ ವಿಚಾರವಾಗಿದೆ ಎಂದು ಹೇಳಿದರು.

ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಡಾ| ಸಾಮುದ್ರಿ ಮಾತನಾಡಿ, ರೆಡ್‌ಕ್ರಾಸ್‌ ಸಂಸ್ಥೆಯ ಮೂಲಕ ಶಿರಹಟ್ಟಿ ಪಟ್ಟಣದಲ್ಲಿ 100ಕ್ಕೂ ಅಧಿಕವಾಗಿ ಬಡವರಿಗೆ ದಿನಸಿ ಕಿಟ್‌ ವಿತರಿಸಲಾಗುತ್ತಿದೆ. ಇಂದರಿಂದ ಬಡವರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ಇದಕ್ಕೆ ಪಟ್ಟಣದ ಎಲ್ಲ ಖಾಸಗಿ ವೈದ್ಯರು ಸಹಕಾರ ನೀಡಿದ್ದು, ಎಲ್ಲರೊಂದಿಗೆ ಬಡವರಿಗಾಗಿ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಡಾ| ವಿಜಯದತ್ತ ಮಂಗಸೂಳಿ, ಡಾ| ಎ.ಎಂ. ಡಾಲಾಯತ, ಡಾ| ಬಸವರಾಜ ಗೋನಾಳ, ಡಾ| ಪವನ ಮಹೇಂದ್ರಕರ, ಡಾ|ಪ್ರಸಾದ ಮಹೇಂದ್ರಕರ, ಡಾ| ಮಹೇಶಗೌಡ, ಫಕ್ಕಿರೇಶ ಕುಳಗೇರಿ, ರವಿ ಬೇಂದ್ರೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next