Advertisement

ಕೇರಳದಲ್ಲಿ ಮತ್ತೆ ಭಾರೀ ಮಳೆ ಎಚ್ಚರಿಕೆ;NDRF ನೆರವು ಕೇಳಿದ ಪಿಣರಾಯಿ

10:46 AM Oct 04, 2018 | Team Udayavani |

ತಿರುವನಂತಪುರ:ಇತ್ತೀಚೆಗಷ್ಟೇ ಶತಮಾನದ ಮಹಾ ಮಳೆಗೆ ತತ್ತರಿಸಿ, ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಕೇರಳಕ್ಕೆ ಮತ್ತೆ  ಮಹಾ ಮಳೆಯ ಭೀತಿ ಎದುರಾಗಿದೆ.

Advertisement

ಶ್ರೀಲಂಕಾಕ್ಕೆ ಸನಿಹದ ಪ್ರಾಂತ್ಯವೊಂದರಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ  ದೈತ್ಯ ಚಂಡ ಮಾರುತದ ಅಲೆಗಳು ಸೃಷ್ಟಿಯಾಗಿದ್ದು ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ  ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ  ನೀಡಿದೆ. 

ಅ. 7ರಂದು ಇಡುಕ್ಕಿ, ತ್ರಿಶೂರ್‌ ಹಾಗೂ ಪಾಲ್ಕಕಾಡ್‌ ಜಿಲ್ಲೆಗಳಲ್ಲಿ ಭಾರಿ  ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು ಈಗಾಗಲೇ ಹೈ ಅಲರ್ಟ್‌ ಘೋಷಿಸಲಾಗಿದೆ. 

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಎಲ್ಲಾ ತುರ್ತು ನೆರವಿಗೆ ಸಿದ್ಧತೆಗಳನ್ನು ನಡೆಸಲು ಸೂಚನೆ ನೀಡಿದ್ದಾರೆ ಮಾತ್ರವಲ್ಲದೆ ಕೇಂದ್ರ ಸರ್ಕಾರದ ನೆರವನ್ನೂ ಕೇಳಿದ್ದಾರೆ. 

ಈಗಾಗಲೆ ಎನ್‌ಡಿಆರ್‌ಎಫ್ನ 5 ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿರುವ ಬಗ್ಗೆ ವರದಿಯಾಗಿದೆ. 

Advertisement

ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಮುದ್ರ ತೀರ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. 

ಬುಧವಾರ ಸಂಜೆಯಿಂದ ತ್ರಿಶೂರ್‌ನಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಆರಂಭವಾಗಿದ್ದು, ಜನ ಜೀವನ ಅಸ್ತವ್ಯಸ್ತ ವಾಗಿದೆ. 

ಕಳೆದ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಮುಳುಗಡೆಯಾಗಿದ್ದ ಕೇರಳದಲ್ಲಿ 231 ಮಂದಿ ಪ್ರಾಣ ಕಳೆದುಕೊಂಡಿದ್ದರು,ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next