Advertisement

Cauvery: ಮರುಕಳಿಸಿದ ಕಾವೇರಿ ಆಘಾತ: ನೀರಿಲ್ಲದಿದ್ದರೂ ನೀರು ಬಿಡಲು ಶಿಫಾರಸು

12:45 AM Sep 13, 2023 | Team Udayavani |

ಹೊಸದಿಲ್ಲಿ/ ಬೆಂಗಳೂರು: ಬುಧವಾರ ಬೆಳಗ್ಗೆಯಿಂದಲೇ ತಮಿಳುನಾಡಿಗೆ 15 ದಿನ 5 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯು ಆರ್‌ಸಿ) ಶಿಫಾರಸು ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮಂಗಳವಾರ ಸಮಿತಿ ವರ್ಚುವಲ್‌ ಆಗಿ ಸಭೆ ಸೇರಿತು. ಕರ್ನಾಟಕದ ಅಧಿಕಾರಿಗಳು ಜಲಾಶಯಕ್ಕೆ ಒಳಹರಿವು ಹೆಚ್ಚಾಗದ ವಿನಾ ನೀರು ಬಿಡಲು ಅಸಾಧ್ಯ ಎಂದರು. ಆದರೆ ಇದನ್ನು ಮನ್ನಿಸದ ಸಮಿತಿಯು ನೀರು ಬಿಡುವಂತೆ ಶಿಫಾರಸು ಮಾಡಿತು.

ಇಂದು ಸರ್ವಪಕ್ಷ ಸಭೆ

ಸಿಡಬ್ಲ್ಯುಆರ್‌ಸಿ ಶಿಫಾರಸಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ ವಿಶೇಷ ಸರ್ವಪಕ್ಷ ಸಭೆ ನಡೆಯಲಿದೆ.

ಸೆ. 21ರಂದು ವಿಚಾರಣೆ

Advertisement

ಕರ್ನಾಟಕ ಸರಕಾರ ನೀರು ನೀಡುತ್ತಿಲ್ಲ ಎಂದು ತಮಿಳುನಾಡು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಹೂಡಿರುವ ದಾವೆಯ ವಿಚಾರಣೆ ಸೆ. 21ಕ್ಕೆ ಮುಂದೂಡಿಕೆಯಾಗಿದೆ. ಈ ಮಧ್ಯೆ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಸಭೆಯೂ ಸೆ. 26ಕ್ಕೆ ನಿಗದಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next