Advertisement

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

12:07 PM Nov 03, 2015 | mahesh |

ಹೊಸದಿಲ್ಲಿ: ದೇಶದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿದೆ. ವಿತ್ತೀಯ ಸಂಸ್ಥೆಗಳು ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಹೂಡಿಕೆ ಮಾಡುವ ನಿಟ್ಟಿನಲ್ಲಿ ಸೂಕ್ತ ಬಂಡವಾಳವನ್ನೂ ಹೊಂದಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೆಲವು ಸಂಸ್ಥೆಗಳು ಬಂಡವಾಳ ಸಂಗ್ರಹಿಸಿವೆ ಮತ್ತು ಇನ್ನು ಕೆಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿವೆ. ಕೊರೊನಾ ಪರಿಸ್ಥಿತಿ ನಿವಾರಣೆಯಾದ ಬಳಿಕ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಪ್ರಕಟಿಸಬೇಕಿದೆ. ಸೋಂಕಿನ ಪರಿಸ್ಥಿತಿಯ ಈ ವೇಳೆಯೂ ದೇಶ ಅತ್ಯುತ್ತಮ ವಿತ್ತೀಯ ನಿಲುವುಗಳನ್ನು ಅನುಷ್ಠಾನಿಸಿದೆ ಎಂದಿದ್ದಾರೆ.

ಇನ್ನೊಂದು ಸುತ್ತಿನ ಪ್ರೋತ್ಸಾಹಕ ಕ್ರಮ?
ಇದೇವೇಳೆ ಆರ್ಥಿಕತೆಯಲ್ಲಿ ಚೇತರಿಕೆ ಉಂಟು ಮಾಡಲು ಕೇಂದ್ರ ಸರಕಾರವು ಇನ್ನೊಂದು ಸುತ್ತಿನ ಪ್ರೋತ್ಸಾಹಕ ಪ್ಯಾಕೇಜ್‌ ಘೋಷಿ ಸುವ ಸಾಧ್ಯತೆ ಇದೆ ಎಂದು ವಿತ್ತೀಯ ವ್ಯವಹಾರಗಳ ಕಾರ್ಯದರ್ಶಿ ತರುಣ್‌ ಬಜಾಜ್‌ ಹೇಳಿರುವುದಾಗಿ ಆಂಗ್ಲ ಪತ್ರಿಕೆ ಯೊಂದು ವರದಿ ಮಾಡಿದೆ. ಈ ವಾರದ ಆರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಇಂಥ ಸಾಧ್ಯತೆಯ ಬಗ್ಗೆ ಮಾತನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next