Advertisement

ಶಿಫಾರಸು ಇದ್ರೆ ಮಾತ್ರ ಕೆಲಸ

10:15 AM Feb 15, 2018 | Team Udayavani |

ಚೆನ್ನೈ:“ಉದ್ಯೋಗಾಕಾಂಕ್ಷಿಗಳೇ ಹೆದರಬೇಡಿ. ತಮಿಳುನಾಡಿನಲ್ಲಿ ಆಡಳಿತಾರೂಢ ಎಐಡಿಎಂಕೆ ನಾಯಕರು ಶಿಫಾರಸು ಮಾಡಿದರೆ ಕೆಲಸ ನೀಡಲಾಗುತ್ತದೆ’ ಹೀಗೆಂದು ವಿಚಿತ್ರ ಭರವಸೆಯನ್ನು ತಮಿಳುನಾಡಿನ ಶಿಕ್ಷಣ ಸಚಿವ ಕೆ.ಎ. ಸೆಂಗೊಟ್ಟ ಯ್ನಾನ್‌ ನೀಡಿದ್ದಾರೆ. ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ವಾಗ್ಧಾನ ಮಾಡಿದ್ದಾರೆ. 

Advertisement

ಈ ವಾಗ್ಧಾನವನ್ನು ಪಕ್ಷದ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ಸಭೆ ನಡೆಸಿದ ವೇಳೆ ನೀಡಿದ್ದಾರೆ ಎಂದು ಕೂಡ ಹೇಳಿದ್ದಾರೆ. ಸೆಂಗೊಟ್ಟ ಯ್ನಾನ್‌ ಈ ವಿವಾದದ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ “ಎನ್‌ಡಿಟಿವಿ’ ವರದಿ ಮಾಡಿದೆ.  ಕಸ ಗುಡಿಸುವವರು, ರೇಶನ್‌ ಅಂಗಡಿಗಳಲ್ಲಿ ಸಹಾಯಕರ ನೇಮಕಾತಿ ಕುರಿತು ಅವರು ಈ ಮಾತನ್ನಾಡಿದ್ದಾರೆ ಎನ್ನಲಾಗಿದೆ.

ಸಚಿವರ ನಡೆಯನ್ನು ಡಿಎಂಕೆ ತೀವ್ರವಾಗಿ ಆಕ್ಷೇಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next