Advertisement

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

05:43 PM Apr 02, 2023 | Team Udayavani |

ಕಲಬುರಗಿ: ಇಲ್ಲಿನ‌ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರೇ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರಲ್ಲದೇ ಸ್ವಾಭಿಮಾನಿ ಹೆಸರಿನಲ್ಲಿ‌ ಸಮಾವೇಶ ಸಹ ನಡೆಸಿದರು.

Advertisement

ಬಿಜೆಪಿ ಬಾವುಟ ಹಿಡಿದು ಮತ್ತಿಮಡು ಹಟಾವೋ ಕಲಬುರಗಿ ಗ್ರಾಮೀಣ ಬಿಜೆಪಿ ಬಚಾವೋ ಎಂಬ ಅಭಿಯಾನ ಕೈಗೊಂಡ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಮುಖರು, ಶಾಸಕ ಮತ್ತಿಮಡು ಲಿಂಗಾಯತರ ವಿರುದ್ದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಶಾಸಕರು ಮೂಲೆಗುಂಪು ಮಾಡಿದ್ದಾರೆ.‌ ಬರೀ ಸುಳ್ಳು ಹೇಳುವುದರಲ್ಲೇ ಕಾಲ ಕಳೆದಿದ್ದಾರೆ. ಹೀಗಾಗಿ ಈ ಬಾರಿ ಟಿಕೆಟ್ ಕೊಡಬೇಡಿ ಸ್ಥಳೀಯ ಪಕ್ಷದ ಮುಖಂಡರಾದ ಅಂಬಾರಾಯ ಅಷ್ಠಗಿ, ಕಮಲಾಕರ ರಾಠೋಡ, ರಾಜಕುಮಾರ ಚವ್ಹಾ, ಅಂಬಾರಾಯ ಬೆಳಕೋಟಾ, ಸೋನುಬಾಯಿ ರಾಠೋಡ ಇವರಲ್ಲಿ ಯಾರಿಗಾದರೂ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಿಜೆಪಿ ವರಿಷ್ಠರಿಗೆ ಪ್ರತಿಭಟನೆ ನಿರತ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.‌

ಪ್ರತಿ ಭಟನಾ ಮೆರವಣಿಗೆಯಲ್ಲಿ ಪ್ರಮುಖರಾದ ವೀರು ಸ್ವಾಮಿ ನರೋಣಾ, ಧರ್ಮಣ್ಣ ಹುಂಪಳ್ಳಿ, ಶಶಿಧರ ಮಾಕಾ, ಸತೀಶ ಪಾಟೀಲ್, ಗುರುಶಾಂತಪ್ಪಗೌಡ ಹೊಡಲ್, ಚಿದಾನಂದ ಪಾಟೀಲ್, ವಿಜಯಕುಮಾರ ಪವಾರ ಸೇರಿದಂತೆ ಮುಂತಾದವರಿದ್ದರು.

ಕಲಬುರಗಿ ನಗರದ ಜಗತ್ ಸರ್ಕಲ್ ದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಬೃಹತ್ ಪ್ರತಿಭಟನೆ ನಡೆಸಿ ತದನಂತರ ಕಲ್ಯಾಣ ಮಂಟಪದಲ್ಲಿ ಸ್ವಾಭಿಮಾನ ಸಮಾವೇಶ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next