Advertisement

ಪವನ್ ಕಲ್ಯಾಣ್ ಸಿನಿಮಾದಿಂದ ಸಾಯಿ ಪಲ್ಲವಿಯನ್ನ ಕೈ ಬಿಟ್ಟಿದ್ದು ಯಾಕೆ ?

03:41 PM May 04, 2021 | Team Udayavani |

ಹೈದರಾಬಾದ್ : ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾವೊಂದಕ್ಕೆ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಸ್ಥಾನಕ್ಕೆ ಬೆಂಗಳೂರಿನ ಬೆಡಗಿ ನಿತ್ಯಾ ಮೆನೆನ್ ಅವರನ್ನು ಆಯ್ಕೆ ಮಾಡಲಾಯಿತು.

Advertisement

ಹಾಗೆ ನೋಡಿದರೆ ತೆಲುಗು ಸಿನಿಮಾ ರಂಗದಲ್ಲಿ ಸಾಯಿ ಪಲ್ಲವಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಫಿದಾ ಹಾಗೂ ಎಮ್‍ಸಿಎ ಸಿನಿಮಾಗಳ ಬಳಿಕ ಪ್ರೇಮಂ ಬೆಡಗಿಗೆ ಡಿಮ್ಯಾಂಡ್ ಕೂಡ ಜಾಸ್ತಿ ಆಯಿತು. ಆದರೆ, ಪವನ್ ಕಲ್ಯಾಣ್ ಚಿತ್ರಕ್ಕೆ ಅವರನ್ನು ಕೈ ಬಿಟ್ಟಿರುವುದು ಯಾಕೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಅಂದುಕೊಂಡಂತಾಗಿದ್ದರೆ ಈಗಾಗಲೇ ಈ ಚಿತ್ರದ ಶೂಟಿಂಗ್ ಶುರುವಾಗಬೇಕಿತ್ತು. ಸಾಯಿ ಪಲ್ಲವಿ ಅವರು ಪವನ್ ಕಲ್ಯಾಣ್ ಅವರ ಪತ್ನಿಯಾಗಿ ನಟಿಸಬೇಕಿತ್ತು. ಎಲ್ಲವೂ ಫೈನಲ್ ಆಯಿತು ಎನ್ನುವಷ್ಟರಲ್ಲಿ ಚಿತ್ರದ ತಾರಾಬಳಗದಿಂದ ಸಾಯಿ ಅವರನ್ನು ಕೈ ಬಿಡಲಾಯಿತು. ಅದಕ್ಕೆ ಕಾರಣ ಸಾಯಿ ಕೇಳಿದ ಸಂಭಾವನೆ.

ಹೌದು, ರಾಣಾ ದಗ್ಗುಬಾಟಿ ಹಾಗೂ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಅವರಿಗೆ ಆಫರ್ ಮಾಡಲಾಗಿತ್ತು. ಇವರೇ ಈ ಚಿತ್ರದ ನಾಯಕಿ ಎನ್ನುವ ಗುಲ್ಲು ಕೇಳಿ ಬಂದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸಾಯಿ ಪಲ್ಲವಿಯ ಬದಲಾಗಿ ನಿತ್ಯಾ ಮೆನೆನ್ ಅವರು ಈ ಸಿನಿಮಾದ ನಾಯಕಿ ಎನ್ನುವ ಸುದ್ದಿ ಹೊರ ಬಿತ್ತು.

ಅಧಿಕ ಸಂಭಾವನೆ :

Advertisement

ಸಾಯಿ ಪಲ್ಲವಿಯವರು ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಕೇಳಿದ್ದರಂತೆ. ಇದು ಚಿತ್ರತಂಡಕ್ಕೆ ಆಘಾತವನ್ನುಂಟು ಮಾಡಿದೆ. ಇಷ್ಟು ಸಂಭಾವನೆ ನೀಡಲು ಸಾಧ್ಯವಾಗದ ಕಾರಣ ಸಾಯಿ ಪಲ್ಲವಿಯ ಬದಲಾಗಿ ನಿತ್ಯಾ ಮೆನೆನ್ ಅವರನ್ನ ಫೈನಲ್ ಮಾಡಲಾಯಿತಂತೆ.

Advertisement

Udayavani is now on Telegram. Click here to join our channel and stay updated with the latest news.

Next