Advertisement

ಯಾವುದೇ ಸಚಿವ ಸ್ಥಾನ ಕೊಟ್ಟರು ನಿಭಾಯಿಸಲು ಸಿದ್ದ ; ಶಾಸಕ ಬಿ.ಸಿ.ಪಾಟೀಲ

03:21 PM Jan 27, 2020 | Team Udayavani |

ಹಾವೇರಿ : ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇರುವ ಎಲ್ಲಾ ಗೊಂದಲಗಳು ಇನ್ನು  ಎರಡು- ಮೂರು ದಿನದಲ್ಲಿ ಸರಿಯಾಗುತ್ತದೆ. ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಅದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ ಎಂದು ಹಿರೆಕೇರೂರು ಶಾಸಕ ಬಿ.ಸಿ.ಪಾಟೀಲ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಸಚಿವ ಸಂಪುಟದ ವಿಸ್ತರಣೆ ಕುರಿತು  ಆಗುತ್ತಿರುವ ಗೊಂದಲಗಳಿಗೆ ಇನ್ನೇನು ಎರಡು – ಮೂರು ದಿನಗಳಲ್ಲಿ ತೆರೆ ಬೀಳಲಿದೆ. ಸಚಿವ ಸ್ಥಾನಕ್ಕೆ ಲಾಬಿ ಮಾಡುವುದು ಸರಿಯಲ್ಲ, ಯಾರಿಗೆ ಸೂಕ್ತ ಸ್ಥಾನ ಸಿಗಬೇಕು ಎನ್ನುವುದನ್ನು ಮುಖ್ಯಮಂತ್ರಿಗಳೇ ನಿರ್ಧಾರಿಸುತ್ತಾರೆ ಎಂದರು.

17 ಜನರಿಗೆ ಸಚಿವ ಸ್ಥಾನ ನೀಡುವುದರಲ್ಲಿ ಸೋತವರು, ಗೆದ್ದವರು ಎಂಬ ವಿಷಯ ಬರುವುದಿಲ್ಲ. ಯಾವಾಗ ನಾವು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದವಿ, ಅಂದಿನಿಂದ ನಾವು ಬಿಜೆಪಿ ಪಕ್ಷದವರು. ನಮಗೆ ಯಾವುದೇ ಸಚಿವ ಸ್ಥಾನ ಕೊಟ್ಟರು ನಿಭಾಯಿಸಲು ಸಿದ್ದ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next