Advertisement

ಲೋಕಾಯುಕ್ತ ಬಲಪಡಿಸಲು ಸಿದ್ಧ: ಆರಗ

10:30 PM Jul 21, 2022 | Team Udayavani |

ಕಡೂರು: ಲೋಕಾಯುಕ್ತ ಸಂಸ್ಥೆಯನ್ನು  ಬಲಪಡಿಸಲು ನಮ್ಮ ಸಹಮತವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾ ಚಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಕಾಂಗ್ರೆಸ್‌ನವರು ಕತ್ತು ಹಿಸುಕಿ ನಾಮಾಕಾವಸ್ಥೆ ಎನ್ನುವಂತೆ ಮಾಡಿದ್ದರು. ಈಗಲೂ ಸಂಸ್ಥೆ ಬಯಸಿದರೆ ಅದಕ್ಕೆ ಬೇಕಾದ ಬಲ ತುಂಬಲು ನಾವು ಸಿದ್ಧರಿದ್ದೇವೆ ಎಂದರು.

ಜಮೀರ್‌ ಮೇಲಿನ ತನಿಖೆಗೆ ಬಿಜೆಪಿ ಕಾರಣವಲ್ಲ. ಅದು ಅವರ ಸ್ವಯಂಕೃತ ಅಪರಾಧ. ದೇಶದ ಕಾನೂನು ಎಲ್ಲರಿಗೂ ಒಂದೇ. ಮಿತಿ ಮೀರಿ ಆದಾಯ ಕಂಡುಬಂದಾಗ ಇ.ಡಿ. ತನಿಖೆ ಸಹಜ ಪ್ರಕ್ರಿಯೆ. ಆ ತನಿಖೆಗೆ ಸಹಕಾರ ನೀಡಬೇಕೇ  ಹೊರತು ವೃಥಾ ಆರೋಪ ಸಲ್ಲದು. ಕೇವಲ ಕಾಂಗ್ರೆಸ್‌ನವರನ್ನೇ ಗುರಿ ಮಾಡಲಾಗುತ್ತಿದೆ ಎಂಬುದು ಊಹಾಪೋಹ ಮಾತ್ರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next