Advertisement

“ಬಿಜೆಪಿ ಜತೆ ಸರ್ಕಾರ ರಚನೆಗೆ ಎಚ್‌ಡಿಕೆ ಸಿದ್ಧ’: ಕೆ.ಎಸ್‌.ಈಶ್ವರಪ್ಪ

12:30 AM Feb 26, 2019 | |

ಬಾಗಲಕೋಟೆ: ಶಾಸಕ ಡಾ.ಉಮೇಶ ಜಾಧವ ಅವರೊಬ್ಬರೇ ಅಲ್ಲ, ಇನ್ನೂ ಹಲವು ಶಾಸಕರು ನಮ್ಮೊಂದಿಗೆ ಬರಲು ಸಿದ್ಧರಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಅಥವಾ ಚುನಾವಣೆ ಬಳಿಕ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಶಾಸಕರು ಬಿಜೆಪಿಗೆ ಸೇರುತ್ತಾರೆ. ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧರಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌-ಕಾಂಗ್ರೆಸ್‌ನ ಸಾಕಷ್ಟು ಶಾಸಕರು ನಮ್ಮೊಂದಿಗೆ ಸೇರುತ್ತಾರೆ. ಕಾಂಗ್ರೆಸ್‌ನಿಂದ ಮುಕ್ತಿ ಪಡೆದರೆ ಸಾಕು ಎಂದು ಕುಮಾರಸ್ವಾಮಿ ನನ್ನ ಬಳಿಯೇ ಹೇಳಿದ್ದಾರೆ. ಕುಮಾರಸ್ವಾಮಿ ನನ್ನೊಂದಿಗೆ ಮಾತನಾಡುವಾಗ ಮುಂದೆ ನಾವು-ನೀವು (ಜೆಡಿಎಸ್‌-ಬಿಜೆಪಿ) ಸೇರಿ ಸರ್ಕಾರ ಮಾಡೋಣ ಎಂದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಇದಕ್ಕೆ ಸ್ಪಷ್ಟರೂಪ ಸಿಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next