Advertisement

ನಾನು ರಾಜೀನಾಮೆ ನೀಡಲೂ ಸಿದ್ಧ

06:32 PM Jun 06, 2021 | Team Udayavani |

ಮೈಸೂರು: ಕೊರೊನಾ ಮುಕ್ತ ಮೈಸೂರಿಗಾಗಿ ಸಚಿವ ಸ್ಥಾನಕ್ಕೆರಾಜೀನಾಮೆ ಕೊಡಲು ನಾನು ಸಿದ್ಧ ಎಂದು ಸಹಕಾರ, ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯಿಸಿದ್ದ  ಹಿನ್ನೆಲೆಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದಅವರು, ನನ್ನ ರಾಜೀನಾಮೆಯಿಂದಕಾಂಗ್ರೆಸ್‌ ನಾಯಕರಿಗೆ ಖುಷಿ ಆಗುತ್ತೆಎನ್ನುವುದಾದರೆ ಮತ್ತು ಜಿಲ್ಲೆಯಲ್ಲಿಕೊರೊನಾ ನಿಯಂತ್ರಣ ಆಗುತ್ತೆ ಅಂದರೆರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್‌ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಕಾಂಗ್ರೆಸ್‌ನವರು ನನ್ನ ಆಡಳಿತ ವೈಫ‌ಲ್ಯ ತಿಳಿಸಿದರೆ ಅದನ್ನುತಿದ್ದುಕೊಳ್ಳುತ್ತೇನೆ. ಕಾಂಗ್ರೆಸ್‌ ಉಸ್ತುವಾರಿ ಸಚಿವರು ಇದ್ದಾಗಎಷ್ಟು ಪ್ರವಾಸ ಮಾಡಿದ್ದಾರೆ. ನಾನು ಎಷ್ಟು ಪ್ರವಾಸ ಮಾಡಿದ್ದೇನೆಎನ್ನುವುದನ್ನು ಅವರೇ ಚಿಂತನೆ ಮಾಡಲಿ. ಧ್ರುವನಾರಾಯಣ್‌ ಕಾರ್ಯಾಧ್ಯಕ್ಷ ಅಂದರೆ ಏನು ಅನ್ನುವುದನ್ನು ಮೊದಲು ತಿಳಿದುಕೊಳ್ಳಲಿ. ನನ್ನ ಬಗ್ಗೆ ಮಾತನಾಡಿದರೆ ಅಪ್‌ಗೆÅàಡ್‌ಆಗುವುದಿದ್ದರೆ ಮಾತನಾಡಲಿ. ಮೈಸೂರಿನ ಗೊಂದಲಕ್ಕೆ ನಾನುಕಾರಣಕರ್ತನಲ್ಲ. ನನ್ನನ್ನ ಟೀಕಿಸಲು ಕಾಂಗ್ರೆಸ್‌ಗೆ ನೈತಿಕತೆಯೇಇಲ್ಲ ಎಂದರು.

ಮೈಸೂರಿನಲ್ಲಿ ಡೀಸಿ ರೋಹಿಣಿ ಸಿಂಧೂರಿ, ಪಾಲಿಕೆಆಯುಕ್ತೆ ಶಿಲ್ಪಾನಾಗ್‌ ಜಟಾಪಟಿ ವಿಚಾರ ಸಂಬಂಧ,ಮೈಸೂರು ಬೆಳವಣಿಗೆ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.ಗೊಂದಲಕ್ಕೆ ಇತಿಶ್ರೀ ಹಾಡುವಂತೆ ಸಿಎಂಗೆ ಮನವಿಮಾಡಿದ್ದೇನೆ. ಮುಖ್ಯ ಕಾರ್ಯದರ್ಶಿ ವರದಿ ಆಧರಿಸಿ ಸಿಎಂಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲೇ ಸಿಎಂ ಏನುಕ್ರಮ ಕೈಗೊಳುತ್ತಾರೆ ಅಂತ ಗೊತ್ತಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next