Advertisement

ವರಿಷ್ಠರು ಸಮ್ಮತಿಸಿದರೆ ನಾಗಠಾಣಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ: ಜಿಗಜಿಣಗಿ

07:36 PM Apr 28, 2022 | Vishnudas Patil |

ವಿಜಯಪುರ : ಬರುವ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸಚಿವ ಕಾರಜೋಳ ಅವರ ಜೊತೆ ಚರ್ಚಿಸುತ್ತೇನೆ. ಪಕ್ಷದ ವರಿಷ್ಠರು ಸಮ್ಮತಿಸಿದರೆ ರಾಜ್ಯ ರಾಜಕಾರಣಕ್ಕೂ ಬರುತ್ತೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಇಂಗಿತ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷ ಲೋಕಸಭೆಗೆ ಸ್ಪರ್ಧಿಸು ಎಂದರೆ ಅಲ್ಲೇ ಮುಂದುವರೆಯುತ್ತೇನೆ. ಬೇಡ ಎಂದರೆ ಸಕ್ರಿಯ ರಾಜಕೀಯದಿಂದ ದೂರ ಸರಿದು ತೋಟದಲ್ಲಿ ತಣ್ಣಗೆ ಇದ್ದು ಬಿಡುತ್ತೇನೆ ಎಂದು ಸಮಜಾಯಿಷಿ ನೀಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಾಹೇಬ ನನ್ನ ಸಹೋದರ ಇದ್ದಂತೆ. ನಮ್ಮ ಸಮಾಜದದ ಓರ್ವ ವ್ಯಕ್ತಿ ರಾಜ್ಯ ರಾಜಕಾರಣದಲ್ಲಿ ಬೆಳೆಯಲಿ ಎಂದೇ ನಾನು ರಾಜ್ಯ ರಾಜಕಾರಣಕ್ಕೆ ತಲೆ ಎತ್ತಿಯೂ ನೋಡಿರಲಿಲ್ಲ.ಸ್ಟೋರ್ ಕೀಪರ್ ಆಗಿದ್ದ ನಮ್ಮ ಸಮಾಜದ ವ್ಯಕ್ತಿಯೊಬ್ಬ ರಾಜಕೀಯವಾಗಿ ಬೆಳೆದು ನಿಂತಿದ್ದಾರೆ ಎಂದರೆ ಅದೇ ನನಗೆ ದೊಡ್ಡ ಖುಷಿ. ಹೀಗಾಗಿ ಕಾರಜೋಳ ಹಾಗೂ ನನ್ನ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ. ಕೆಲವರು ಸುಖಾಸುಮ್ಮನೆ ಕಾರಜೋಳ-ಜಿಗಜಿಣಗಿ ಮಧ್ಯೆ ಸರಿ ಇಲ್ಲ ಎಂದೆಲ್ಲ ಕಲ್ಪಿತ ಸುದ್ದಿ ಹರಡಿಸುತ್ತಿದ್ದಾರೆ ಎಂದು ಸ್ಪಷ್ಟೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next