Advertisement

ಸ್ಥಳೀಯ ಮಾರುಕಟ್ಟೆಗೆ ಆರ್‌ಸಿಇಪಿ ಪೆಟ್ಟು?

12:38 PM Nov 03, 2019 | Team Udayavani |

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಎಂಬ ಹೊಸ ವ್ಯಾಪಾರ ಒಪ್ಪಂದವೊಂದು ದೇಶಕ್ಕೆ ಪರಿಚಯವಾಗಲಿದೆ. ಹಲವು ದೇಶಗಳನ್ನು ಒಳಗೊಂಡ ಈ ಸಹಭಾಗಿತ್ವದ ವ್ಯಾಪಾರದಲ್ಲಿ ಭಾರತ ಪಾಲುದಾರ ರಾಷ್ಟ್ರವಾಗುವುದು ಬಹುತೇಕ ಖಚಿತವಾಗಿದೆ. ಈ ವ್ಯಾಪಾರ ಕ್ರಮದಲ್ಲಿ ಹಲವು ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಚರ್ಚೆಯಾಗುತ್ತಿವೆ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದೇ ಆದರೆ ಸಣ್ಣಮಟ್ಟದ ಉದ್ದಿಮೆಗಳು, ವ್ಯಾಪಾರಿಗಳು ಮತ್ತು ರೈತರ ಮೇಲೆ ವ್ಯತಿರಿಕ್ತ ಪರಿಣಾಮದ ಆತಂಕವಿದೆ.

Advertisement

ಏನಿದು ಆರ್‌ಸಿಇಪಿ?
ಆರ್‌ಸಿಇಪಿ (Regional Comprehensive Economic Partnership) ಇದು ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ. ಇದರಲ್ಲಿ ಆಗ್ನೇಯ ಏಷ್ಯಾದ 10 ದೇಶಗಳು ಮತ್ತು ಬಲಿಷ್ಠ ವ್ಯಾಪಾರಿ ದೇಶಗಳೆನಿಸಿಕೊಂಡ ಚೀನ, ಆಸ್ಟ್ರೇ ಲಿಯಾ, ನ್ಯೂಜಿಲೆಂಡ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾ ಒಳಗೊಳ್ಳುತ್ತವೆ. ಪರಸ್ಪರ ಆಮದು ಮತ್ತು ರಫ್ತು ಮೇಲೆ ಕಡಿಮೆ ತೆರಿಗೆ ಇರಲಿದೆ.

ಲಾಭಗಳೇನು?
16 ದೇಶಗಳ ನಡುವಿನ ವ್ಯಾಪಾರವು ಜಾಗತಿಕ ವ್ಯಾಪಾರದ ಕಾಲು ಭಾಗಕ್ಕಿಂತ ಹೆಚ್ಚಿದೆ. ಈ ರಾಷ್ಟ್ರಗಳು ಮುಕ್ತ ಮಾರುಕಟ್ಟೆಯನ್ನು ಒದಗಿಸುತ್ತವೆ. ಒಪ್ಪಂದದ ಪರಿಧಿಯಲ್ಲಿರುವ ದೇಶ ಮತ್ತೂಂದು ದೇಶದಿಂದ ಯಾವುದೇ ಅಗತ್ಯ ವಸ್ತುಗಳನ್ನು ಅತ್ಯಲ್ಪ ತೆರಿಗೆ ಮೂಲಕ ಕೊಳ್ಳುವ ಮತ್ತು ಮಾರಾಟ ಮಾಡಲು ಸ್ವತಂತ್ರವಾಗಿರುತ್ತದೆ. ಇದು ವ್ಯಾಪಾರ ವೃದ್ಧಿಗೆ ಅನುಕೂಲವಾಗಲಿದೆ. ಜತೆಗೆ ಪಾಶ್ಚಾತ್ಯ ದೇಶಗಳ ಅವಲಂಬನೆ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ನಷ್ಟ ವೇನು?
ಆರ್‌ಸಿಇಪಿಯಲ್ಲಿ ನೋಂದಾಯಿಸಲಾಗಿರುವ ಪ್ರತಿಯೊಂದು ದೇಶವೂ ತನ್ನಲ್ಲಿ ಇತರ ದೇಶಗಳು ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡು ತ್ತವೆ. ಇದರಿಂದ ಪ್ರಬಲ ದೇಶಗಳು ಭಾರತದಲ್ಲಿ ಮಾರುಕಟ್ಟೆ ತೆರೆದು ಇಲ್ಲಿನ ಮೂಲ ಕಸುಬು ಮತ್ತು ಉತ್ಪನ್ನವನ್ನು ಹಿಮ್ಮೆಟ್ಟಿಸುವ ಅಪಾಯ ಇದೆ. ಇದರಿಂದ ಕೃಷಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಅಪಾಯ.

ಕೃಷಿಗೆ ಹಾನಿ ಹೇಗೆ?
ಕೃಷಿ ದೇಶದ ಬೆನ್ನೆಲುಬಾಗಿರುವ ರಾಷ್ಟ್ರದಲ್ಲಿ ಹೊರ ದೇಶಗಳಿಂದ ಬರುವ ಉತ್ಪನ್ನಗಳೇ ಮಾರಾಟವಾದರೆ ರೈತರು ಬೆಳೆಯುವ ಆಹಾರ ಪದಾರ್ಥಗಳಿಗೆ ಬೇಡಿಕೆ ಕುಸಿಯಬಹುದು. ಜೀವನಕ್ಕಾಗಿ ಕೃಷಿ ಬೆಳೆಯನ್ನು ಅವಲಂಬಿಸಿದ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ.

Advertisement

ಚೀನ ನಿರ್ಣಾಯಕ
ಈಗಾಗಲೇ ದೇಶದಲ್ಲಿ ಚೀನದ ವಸ್ತುಗಳ ಪ್ರಮಾಣ ಹೆಚ್ಚಿದೆ. ಈ ಆರ್‌ಸಿಇಪಿಯಲ್ಲಿ ಸದಸ್ಯ ರಾಷ್ಟ್ರವಾಗಿರುವ ಚೀನ ಉತ್ಪನ್ನಗಳು ಭಾರತಕ್ಕೆ ಮುಕ್ತವಾಗಿ ಬರಲಿವೆ. ಇದರಿಂದ ಈಗಿರುವ ಶೇ. 70-80ರಷ್ಟು ತೆರಿಗೆ ಇಳಿಸಬೇಕಾಗುತ್ತದೆ. ಇದು ದೇಶೀಯ ಮಾರುಕಟ್ಟೆಗೆ ಬಹುದೊಡ್ಡ ಅಪಾಯ.

ಯಾಕೆ ಬೇಡ?
ಹಾಲು ಸೇರಿದಂತೆ ಕ್ಷೀರೋತ್ಪನ್ನಗಳು, ರಬ್ಬರ್‌, ಭತ್ತ, ಮತೊÕéàದ್ಯಮ, ಅಡಿಕೆ, ಕಾಳುಮೆಣಸು, ಚಹಾ ಮೊದಲಾದ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆಯಾಗಲಿದೆ. ಇದು ತಂತ್ರಜ್ಞಾನಗಳನ್ನೂ
ಕಡಿಮೆ ದರದಲ್ಲಿ ದೇಶದೊಳಗೆ ಬಿಡಲಿದ್ದು, ಉದ್ಯಮಗಳಿಗೆ ನಷ್ಟವಾಗುವ ಭೀತಿ ಇದೆ. ದೇಶಿಯ ಹೈನುಗಾರಿಕೆಗೆ ನ್ಯೂಜಿಲೆಂಡ್‌ ಪೈಪೋಟಿ ನೀಡಲಿದೆ.

ಭಾರತ ಸಹಿ ಹಾಕುವುದೇ?
ಭಾರತ ಸಹಿ ಹಾಕುವುದು ಇನ್ನೂ ಗೊಂದಲದಲ್ಲಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಸರಕಾರ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ನವೆಂಬರ್‌ 4ರಂದು ಇದರ ಸಭೆ ಸೇರಲಿದ್ದು,ಅಂದೇ ತೀರ್ಮಾಣವಾಗಲಿದೆ. ಕರಾವಳಿಗೆ ಪೆಟ್ಟು
ದೇಶೀಯ ಮಾರುಕಟ್ಟೆಗೆ ಅಡಿಕೆ, ಕಾಳುಮೆಣಸು ಆಮದಾಗಲಿದ್ದು ದೇಶಿ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿದೆ. ರಾಜ್ಯದಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್‌ ಅಡಿಕೆ ಬೆಳೆಯುವ ಪ್ರದೇಶಗಳಿವೆ. ಅಡಿಕೆ ಆಮದಾಗಿದ್ದ ಸಂದರ್ಭ ಇಲ್ಲಿನ ಮಾರುಕಟ್ಟೆ ಕುಸಿದಿತ್ತು.

ಶೇ. 16
ದೇಶದಲ್ಲಿ ಕೈಗಾರಿಕಾ ಪ್ರಗತಿ ನಿರೀಕ್ಷಿತ ಮಟ್ಟ ದಲ್ಲಿ ಆಗುತ್ತಿಲ್ಲ. ನಮ್ಮ ಜಿಡಿಪಿಯ ಶೇ.16ರಷ್ಟು ಪಾಲನ್ನು ಮಾತ್ರ ಕೈಗಾರಿಕೆಗಳು ಹೊಂದಿವೆ. ಇದನ್ನು ನಿರೀಕ್ಷಿತ ಶೇ.25ರಷ್ಟಕ್ಕೆ ಏರಿಸುವ ಪ್ರಸ್ತಾ ವನೆ ಇದೆಯಾದರೂ ಕೈಗೂಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಬಲಶಾಲಿಯಾಗಿರುವ ಚೀನದ ಉತ್ಪನ್ನಗಳು ದೇಶದೊಳಕ್ಕೆ ಬರತೊಡಗಿದರೆ ಸ್ಥಳಿಯ ಕೈಗಾರಿಕೆಗಳಿಗೆ ಅಪಾಯ ಎನ್ನಲಾಗಿದೆ.

ಶೇ. 90
ಭಾರತ ಈಗಾಗಲೇ ಆಸಿಯಾನ್‌ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ನೀತಿ ಹೊಂದಿದ್ದು, ಅವುಗಳ ಜತೆ ಶೇ. 80ರ ತೆರಿಗೆ ವಿನಾಯಿತಿ ಜಾರಿಯಲ್ಲಿದೆ. ಜಪಾನ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ಜತೆ ಶೇ.65ರ ತೆರಿಗೆ ವಿನಾಯಿತಿ ಇಟ್ಟುಕೊಳ್ಳಲಾಗಿದೆ. ಚಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ
ಶೇ.42ರಷ್ಟು ತೆರಿಗೆ ಕಡಿತ ಇದೆ. ಆರ್‌ಸಿಇಪಿ ಜಾರಿಗೆ ಬಂದರೆ ವಿನಾಯಿತಿ ಶೇ. 90ಕ್ಕೆ ಏರಲಿದೆ.

304 ಕೋಟಿ
16 ಸದಸ್ಯ ರಾಷ್ಟ್ರಗಳ ಒಟ್ಟು ಜನ ಸಂಖ್ಯೆ 304 ಕೋಟಿ. 49.5 ಲ.ಕೋ. ಡಾಲರ್‌ ಇದರ ಜಿಡಿಪಿ.

ಯಾವ್ಯಾವ ರಾಷ್ಟ್ರಗಳು?
· ಭಾರತ · ಚೀನ
· ಆಸ್ಟ್ರೇಲಿಯಾ
· ಜಪಾನ್‌
· ಲಾವೋಸ್‌
· ಇಂಡೋ ನೇಶ್ಯಾ
· ಮಲೇಷ್ಯಾ
· ಮ್ಯಾನ್ಮಾರ್‌
· ನ್ಯೂಜಿಲೆಂಡ್‌
· ಫಿಲಿಪ್ಪೀನ್ಸ್‌
· ಸಿಂಗಾಪುರ
· ಥಾಯ್ಲೆಂಡ್‌
· ವಿಯೆಟ್ನಾಂ
· ದಕ್ಷಿಣ ಕೊರಿಯಾ
· ಬ್ರೂನೈ
· ಕಾಂಬೋಡಿಯಾ

Advertisement

Udayavani is now on Telegram. Click here to join our channel and stay updated with the latest news.

Next