Advertisement

ಬೆಂಗಳೂರು-ರಾಜಸ್ಥಾನ್‌ ಪಂದ್ಯ ರದ್ದು

09:02 AM May 02, 2019 | keerthan |

ಬೆಂಗಳೂರು: ಭಾರೀ ಮಳೆಯಿಂದ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಣ ಮಂಗಳವಾರದ ಐಪಿಎಲ್‌ ಪಂದ್ಯ ರದ್ದುಗೊಂಡಿದೆ. ಮಳೆಯಿಂದಾಗಿ 5 ಓವರ್‌ಗಳಿಗೆ ಸೀಮಿತವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ತಂಡವು 7 ವಿಕೆಟಿಗೆ 62 ರನ್‌ ಗಳಿಸಿತ್ತು.

Advertisement

ಶ್ರೇಯಸ್‌ ಗೋಪಾಲ್‌ ಸತತ ಮೂರು ಎಸೆತಗಳಲ್ಲಿ ಕೊಹ್ಲಿ, ಡಿ’ವಿಲಿಯರ್ ಮತ್ತು ಸ್ಟೋಯಿನಿಸ್‌ ಅವರ ವಿಕೆಟ್‌ ಹಾರಿಸಿ ಹ್ಯಾಟ್ರಿಕ್‌ ಸಾಧಿಸಿದ್ದರು. ಇದಕ್ಕುತ್ತರವಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡವು 3.2 ಓವರ್‌ ತಲುಪಿದಾಗ ಮತ್ತೆ ಮಳೆ ಸುರಿಯಿತು. ಇದರಿಂದ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಈ ಹಂತದಲ್ಲಿ ರಾಜಸ್ಥಾನ್‌ ಒಂದು ವಿಕೆಟಿಗೆ 41 ರನ್‌ ಗಳಿಸಿತ್ತು.

ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮಳೆಯದೇ ಆಟ. ಟಾಸ್‌ ಗೆದ್ದು ರಾಜಸ್ಥಾನ ರಾಯಲ್ಸ್‌ ಫೀಲ್ಡಿಂಗ್‌ ಆಯ್ಕೆ ಮಾಡಿ ಕೊಂಡರೂ ತುಸು ಹೊತ್ತಿನಲ್ಲೇ ಮಳೆ ಸುರಿಯಲಾರಂಭಿಸಿ ಆಟವನ್ನು ಮುಂದೂಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next