ಅಭಿಮಾನಿಗಳಿಗೆ ಮನೋರಂಜನೆಯ ಮಳೆಯನ್ನು ಸುರಿಸಲಿದೆ. ಎಲ್ಲ ತಂಡಗಳು ಕೂಡ ಕದನಕ್ಕೆ ಸಜ್ಜಾಗುತ್ತಿವೆ. ಇದಕ್ಕೆ ಆತಿಥೇಯ
ರಾಯಲ್ ಚಾಲೆಂಜರ್ ಬೆಂಗಳೂರು (ಆರ್ಸಿಬಿ) ತಂಡ ಕೂಡ ಹೊರತಾಗಿಲ್ಲ.
Advertisement
ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಬೌಲಿಂಗ್ ಕೋಚ್ ಆಶಿಷ್ ನೆಹ್ರಾ ಹಾಗೂ ಫಿಲ್ಡಿಂಗ್ ಕೋಚ್ ಟ್ರೆಂಟ್ ವುಡ್ಹಿಲ್ ಆಟಗಾರರಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತರಬೇತಿ ಶುರು ಮಾಡಿಕೊಂಡಿದ್ದಾರೆ. ಸಫ್ರಾìಜ್ ಖಾನ್, ಪಾರ್ಥಿವ್ ಪಟೇಲ್, ಪವನ್ ನೆಗಿ, ಅನಿರುದ್ಟಛಿ ಜೋಶಿ, ಮನನ್ ವೊಹ್ರಾ, ಕುಲ್ವಂತ್ ಖೆಜೊಲಿಯಾ, ಎಂ.ಅಶ್ವಿನ್, ಅಂಕಿತ್ ಚೌಧರಿ ಹಾಗೂ ಮನ್ದೀಪ್ ಸಿಂಗ್ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಸದ್ಯ ಫಿಟೆ°ಸ್ ತರಬೇತಿ ಶುರುವಾಗಿದೆ. ಎ.ಐ.ಹರ್ಷ ಹಾಗೂ ಶ್ರವಣ್
ಕುಂಬಗೌಡನ ಮಾರ್ಗದರ್ಶನದಲ್ಲಿ ಆಟಗಾರರು ಫಿಟೆ°ಸ್ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಲಂಕಾ ತ್ರಿಕೋನ ಟಿ20 ಸರಣಿಯಿಂದ ಹೊರಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಕೊಹ್ಲಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. ಅಂತೆಯೆ ಎಬಿಡಿ ವಿಲಿಯರ್ ಸೇರಿದಂತೆ ಪ್ರಮುಖ ಆಟಗಾರರು ಕೂಡ ಶಿಬಿರ ಕೂಡಿಕೊಳ್ಳುವ ನಿರೀಕ್ಷೆ ಇದೆ.