Advertisement

ಟ್ವೀಟರ್‌ನಲ್ಲಿ ಆರ್‌ಸಿಬಿಗೆ ಅಭಿಮಾನಿಗಳ ಬೈಗುಳ

05:35 AM Apr 03, 2019 | Team Udayavani |

ಬೆಂಗಳೂರು: ಹ್ಯಾಟ್ರಿಕ್‌ ಸೋಲು ಅನುಭವಿಸಿದ ಆರ್‌ಸಿಬಿ
(ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ವಿರುದ್ಧ ಅಭಿಮಾನಿಗಳು ಸಿಡಿದಿದ್ದಾರೆ. ಟ್ವೀಟರ್‌, ಫೇಸ್‌ಬುಕ್‌ನಲ್ಲಿ ಗರಂ ಆಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲಿ ಆಯ್ದ ಕೆಲವು ಇಲ್ಲಿದೆ ನೋಡಿ. “ಕೊಹ್ಲಿ ಆರ್‌ಸಿಬಿಯನ್ನು ಗೆಲ್ಲಿಸುವುದು ಬಿಟ್ಟು ತಮ್ಮ ವೈಯಕ್ತಿಕ ಸಾಧನೆ
ಮಾಡುತ್ತಿದ್ದಾರೆ’ ಎಂದು ಅಭಿಮಾನಿ ನವೀನ್‌ ಶೆಟ್ಟಿ ಎನ್ನುವವರು ದೂರಿದ್ದಾರೆ. ಮತ್ತೂಬ್ಬ ಅಭಿಮಾನಿ ರಕ್ಷಿತ್‌ ಅನಿಲ್‌ ಕುಮಾರ್‌ ಎನ್ನುವವರು “ಮೊದಲು ವಿರಾಟ್‌ ಕೊಹ್ಲಿಯನ್ನು ಆರ್‌ಸಿಬಿ ನಾಯಕತ್ವ ಸ್ಥಾನದಿಂದ ಕಿತ್ತು ಹಾಕಿ’ ಎಂದಿದ್ದಾರೆ. ಮತ್ತೂಬ್ಬ ಅಭಿಮಾನಿ ಸುನಿಲ್‌ ಎನ್ನುವವರು “ಆರ್‌ಸಿಬಿಗೆ ಕಳೆದ ಕೆಲವು ವರ್ಷಗಳಿಂದ ನಾಯಕನಾಗಿರುವ ಕೊಹ್ಲಿ ಕೇವಲ ಡಮ್ಮಿ ನಾಯಕರಂತೆ ಕಾಣುತ್ತಿದ್ದಾರೆ. ಇವರಿಗೆ ಒಂದು ಸಲವೂ ಕಪ್‌ ಗೆದ್ದು ಕೊಡಲು ಸಾಧ್ಯವಾಗದಿರುವುದು ದೌಭಾಗ್ಯವೇ ಸರಿ’ ಎಂದಿದ್ದಾರೆ. ಬೆಂಗಳೂರು ಮೊದಲ ಪಂದ್ಯದಲ್ಲಿ ಚೆನ್ನೈ, ಎರಡನೇ ಪಂದ್ಯದಲ್ಲಿ ಮುಂಬೈ ಹಾಗೂ ಮೂರನೇ ಪಂದ್ಯದಲ್ಲಿ ಹೈದ್ರಾಬಾದ್‌ ವಿರುದ್ಧ ಸತತ ಸೋಲು ಕಂಡು ಕೂಟದಲ್ಲಿ ಹೀನಾಯ ಆರಂಭ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next