Advertisement

ಆರ್‌ಬಿಐ ಡ್ಯೆಪುಟಿ ಗವರ್ನರ್‌ ವಿರಳ್‌ ಆಚಾರ್ಯ ದಿಢೀರ್‌ ರಾಜೀನಾಮೆ

10:02 AM Jun 25, 2019 | Team Udayavani |

ಹೊಸದಲ್ಲಿ: ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಡ್ಯೆಪುಟಿ ಗವರ್ನರ್‌ ವಿರಳ್‌ ಆಚಾರ್ಯ ಅವರು ದಿಢೀರ್‌ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ಅವರ ಅಧಿಕಾರವದಿ ಇನ್ನೂ 6 ತಿಂಗಳು ಇರುವಾಗಲೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.

ಭಾರತದ ಅತ್ಯಂತ ಕಿರಿಯ ಡ್ಯೆಪುಟಿ ಗವರ್ನರ್‌ ಎಂಬ ಖ್ಯಾತಿ ಹೊಂದಿದ್ದ ವಿರಳ್‌ ಅವರು 2017 ಜನವರಿ 23 ರಂದು ಸೆಂಟ್ರಲ್‌ ಬ್ಯಾಂಕ್‌ಗೆ ಸೇರಿದ್ದರು.

ವಿರಳ್‌ ಅವರ ಕುಟುಂಬ ನ್ಯೂಯಾರ್ಕ್‌ನಲ್ಲಿದ್ದು ಅವರು ಅಲ್ಲಿಗೆ ಮರಳಿ ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next