Advertisement

ಇಂದು ಆರ್‌ಬಿಐ ಮಂಡಳಿ ಸಭೆ

09:24 AM Nov 19, 2018 | Team Udayavani |

ಹೊಸದಿಲ್ಲಿ: ಬಹು ನಿರೀಕ್ಷಿತ ಆರ್‌ಬಿಐ ಮಂಡಳಿಯ ಸಭೆ ಸೋಮವಾರ ನಡೆಯಲಿದೆ. ಈ ವೇಳೆ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ರನ್ನು ವಿತ್ತ ಸಚಿವಾಲಯ ಶಿಫಾರಸು ಮಾಡಿದ ಅಧಿಕಾರಿಗಳು, ಸ್ವತಂತ್ರ ನಿರ್ದೇಶಕರು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಎನ್‌ಪಿಎ ಬಗ್ಗೆ ಆರ್‌ಬಿಐ ನೀತಿ, ಎಂಎಸ್‌ಎಂಇಗಳಿಗೆ ಸಾಲ ನೀಡಿಕೆ ಸೇರಿ ಪ್ರಮುಖ ವಿಚಾರಗಳ ಕುರಿತು ಬಿರುಸಿನ ಚರ್ಚೆಗಳಾಗಲಿವೆ. ಪ್ರಧಾನಿ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿದ್ದ ಪಟೇಲ್‌ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ವಿವರಣೆ ನೀಡಿದ್ದಾರೆ. ಹೀಗಾಗಿ ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದ್ದಂತೆ ಗವರ್ನರ್‌ ಸ್ಥಾನಕ್ಕೆ ಊರ್ಜಿತ್‌ ರಾಜೀನಾಮೆ ನೀಡುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.

Advertisement

ಇದೇ ವೇಳೆ ಕೇಂದ್ರ ಸರಕಾರ ಆರ್‌ಬಿಐನಲ್ಲಿರುವ 9 ಲಕ್ಷ ಕೋಟಿ ರೂ. ಮೀಸಲು ನಿಧಿಯ ಮೇಲೆ ನಿಯಂತ್ರಣ ಹೇರಲು ಮುಂದಾಗುತ್ತಿದೆ ಎಂದು ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next