Advertisement

ರಾಯಬಾಗ: ಲೋಕ ಅದಾಲತ್‌

02:31 PM Jul 15, 2019 | Team Udayavani |

ರಾಯಬಾಗ: ಪಕ್ಷಗಾರರು ತಮ್ಮ ಕೇಸ್‌ಗಳನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿಕೊಂಡು ತಮ್ಮ ನೆರೆಹೊರೆಯವರೊಂದಿಗೆ, ಸಂಬಂಧಿಗಳೊಂದಿಗೆ ನೆಮ್ಮದಿಯಿಂದ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧಿಧೀಶರಾದ ಧರ್ಮಗಿರಿ ರಾಮಸ್ವಾಮಿ ಹೇಳಿದರು. ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ಬೃಹತ್‌ ಲೋಕ ಅದಾಲತ್‌ ಉದ್ದೇಶಿಸಿ ಮಾತನಾಡಿದ ಅವರು, ಲೋಕ ಅದಾಲತ್‌ದಲ್ಲಿ ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಕೇಸ್‌ಗಳು ಸೇರಿ ಒಟ್ಟು 379 ದಾವೆಗಳನ್ನು ಉಭಯ ಪಕ್ಷಗಾರರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಯಿತು ಎಂದು ತಿಳಿಸಿದರು. ಪ್ರಧಾನ ದಿವಾಣಿ ನ್ಯಾಯಾಧಿಧೀಶರಾದ ಸೋಮಾ ಎ.ಎಸ್‌., ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಜಿ.ಬಿ. ಹಳ್ಳಕಾಯಿ, ಸ.ಸ. ಅಭಿಯೋಜಕ ಎಂ.ಪಿ. ಗಾಂವ್ಕರ್‌, ತಹಶೀಲ್ದಾರ್‌ ಡಿ.ಎಚ್. ಕೋಮರ ಹಾಗೂ ನ್ಯಾಯವಾದಿಗಳು ಮತ್ತು ಪಕ್ಷಗಾರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next