Advertisement

ರಾವತ್‌ ಸಾವು ರಾಷ್ಟ್ರಕ್ಕೆ ನಷ್ಟ

11:01 AM Dec 10, 2021 | Team Udayavani |

ಚಿತ್ತಾಪುರ: ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟ ಜನರಲ್‌ ಬಿಪಿನ್‌ ರಾವತ್‌ ಬುಧವಾರ ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಉಪಾಧ್ಯಕ್ಷ ಅಶ್ವತ್ಥ್ ರಾಠೊಡ ಸಂತಾಪ ಸೂಚಿಸಿದ್ದಾರೆ.

Advertisement

ಪಟ್ಟಣದ ಲಾಡ್ಜಿಂಗ್‌ ಕ್ರಾಸ್‌ ಹತ್ತಿರ ಬುಧವಾರ ದಿ. ಬಿಪಿನ್‌ ರಾವತ್‌ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ರಾವತ್‌ ಸೇರಿದಂತೆ 11 ಸೇನಾ ಸಿಬ್ಬಂದಿ ಮೃತಪಟ್ಟಿರುವುದು ತುಂಬಾ ದುಃಖಕರ ಸಂಗತಿ ಎಂದು ಹೇಳಿದರು.

ರಾವತ್‌ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸೇನಾಪಡೆ, ವಾಯುಪಡೆ, ನೌಕಾಪಡೆಗಳನ್ನು ಬೆಸೆಯುವ ಯೋಜನೆಯನ್ನು ಅವರು ಸಿದ್ಧಪಡಿಸಿದ್ದರು ಎಂದು ಸ್ಮರಿಸಿದರು. ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಅಂಬರೀಶ ಸುಲೇಗಾಂವ, ತಾಲೂಕು ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಮೇಘರಾಜ ಗುತ್ತೇದಾರ, ಸಂತೋಷ ಅಲ್ಲೂರಕರ್‌, ಪ್ರಹ್ಲಾದ ವಿಶ್ವಕರ್ಮ, ಕಾಶಿನಾಥ ಸಂಗಾವಿ, ಮನೋಜ ರಾಠೊಡ, ಮಲ್ಲಿಕಾರ್ಜುನ ಉಪ್ಪಾರ, ದಶರಥ ದೊಡ್ಡಮನಿ, ಅಜಯ ಬಿದರಿ, ಶರಣು, ಆಕಾಶ, ಬಸ್ಸು, ಚಂದು, ರಾಹುಲ್‌, ಗುರುರಾಜ, ರಮೇಶ ಇನ್ನಿತರರು ಇದ್ದರು. ನಂತರ ಮೌನಾಚರಣೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next