Advertisement

ಗಂಗೂಲಿಗೆ ಭೇಷ್‌ ಎಂದ ರವಿಶಾಸ್ತ್ರಿ

12:48 AM Nov 27, 2019 | sudhir |

ಕೋಲ್ಕತಾ: ಭಾರತದ ಚಾರಿತ್ರಿಕ ಪಿಂಕ್‌ ಬಾಲ್‌ ಡೆ-ನೈಟ್‌ ಟೆಸ್ಟ್‌ ಪಂದ್ಯ ಆಯೋಜನೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ ಮಹತ್ತರ ಪಾತ್ರ ವಹಿಸಿ¨ªಾರೆ ಎಂದು ಟೀಮ್‌ ಇಂಡಿಯಾ ಕೋಚ್‌ ರವಿಶಾಸ್ತ್ರಿ ಹಾಡಿ ಹೊಗಳಿದ್ದಾರೆ.

Advertisement

ಇತ್ತಂಡಗಳನ್ನು ಆಡಲು ಒಪ್ಪಿಸುವುದರಿಂದ ಹಿಡಿದು ಕೋಲ್ಕತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಪಿಂಕ್‌ ಟೆಸ್ಟ್‌ ಪಂದ್ಯ ನಡೆಯುವವರೆಗೂ ಗಂಗೂಲಿ ಎಲ್ಲ ರೀತಿಯಲ್ಲಿ ವ್ಯವಸ್ಥಿತವಾಗಿ ಸಕಲ ವ್ಯವಸ್ಥೆ ಮಾಡಿದ್ದಾರೆ. ಈ ಒಂದು ಐತಿಹಾಸಿಕ ಪಂದ್ಯಕ್ಕಾಗಿ ಹಗಲು ರಾತ್ರಿ ಎನ್ನದೆ ತಮ್ಮ ಮನೆಯ ಕಾರ್ಯಕ್ರಮ ಎನ್ನುವಂತೆ ಗಂಗೂಲಿ ಶ್ರಮಪಟ್ಟಿದ್ದಾರೆ. ಈ ಕೆಲಸಕ್ಕಾಗಿ ರವಿಶಾಸ್ತ್ರಿ ಭಲೇ ! ಭೇಷ್‌ ಎಂದು ಗಂಗೂಲಿ ಅವರನ್ನು ಹೊಗಳಿದ್ದಾರೆ. ಇದರೊಂದಿಗೆ ಗಂಗೂಲಿ ಮತ್ತು ಶಾಸ್ತ್ರಿ ನಡುವೆ ಎಲ್ಲವೂ ಸರಿ ಇದೆ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next