Advertisement

ಅಣೆಕಟ್ಟೆಗೆ ಅಪಾಯವಿಲ್ಲ, ದೃ‌ಷ್ಟಿ ಪೂಜೆ ಮಾಡಿಸುವೆ

12:51 PM Jul 20, 2021 | Team Udayavani |

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಅಣೆಕಟ್ಟೆಯ ಒಳ ಭಾಗದ ಬಳಿ ಇರುವ ಉದ್ಯಾನವನಕ್ಕೆ ಹೋಗುವ ರಸ್ತೆಯ ಪ್ರದೇಶದ ಕಟ್ಟಡದಲ್ಲಿ ಕಲ್ಲುಗಳು ಕುಸಿದಿದೆ ಹೊರೆತು ಅಣೆಕಟ್ಟೆಗೆಯಾವುದೇ ಸಂಬಂಧವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

Advertisement

ಕುಸಿತ ಹಿನ್ನೆಲೆ ಪರಿಶೀಲನೆ ನಡೆಸಿದಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಈಗಾಗಲೇ ಸ್ಥಳ ಪರಿಶೀಲನೆ, ಅಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಣೆಕಟ್ಟೆಗೂ ಕುಸಿತದ ಪ್ರದೇಶಕೂ ಸುಮಾರು16ಮೀಟರ್‌ ಅಂತರವಿದೆ. ಆ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಅಧಿಕಾರಿ ಗಳಿಗೆ ತಕ್ಷಣದಲ್ಲಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದೇನೆ. ಕಾಮಗಾರಿ ಕೂಡ ಈಗಾಗಲೇ ನಡೆಯುತ್ತಿರುವುದರಿಂದ ಸರ್ಕಾರಕೂಡಅಣೆಕಟ್ಟೆಪರಿಶೀಲನೆನಡೆಸಿಈ ವಿಚಾರದಲ್ಲಿ ಸುಭದ್ರವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ದೃಷ್ಟಿಹೋಮ ಮಾಡಬೇಕು: ಪದೇ ಪದೆ ಎಷ್ಟೋ ಮಂದಿ ಕೆಆರ್‌ಎಸ್‌ ವಿಚಾರದಲ್ಲಿ ಮಾತನಾಡುವ ವೃತ್ತಿ ಮಾಡಿ ಕೊಂಡಿದ್ದಾರೆ. ಆದ್ದರಿಂದ ಅಣೆಕಟ್ಟೆಗೆ ದೃಷ್ಟಿಯಾಗಿದೆ. ದೃಷ್ಟಿಹೋಮ ಮಾಡಿಸಿ ಎಂದು ಸರ್ಕಾರಕ್ಕೂ ಈ ವಿಷಯ ತಿಳಿಸಿದ್ದೇನೆ. ಸರ್ಕಾರ ಮಾಡದಿದ್ದರೆ ನಾನೇ ಒಂದು ದಿನ ಹೋಮಪೂಜೆ ಮಾಡುವ ಯೋಚನೆ ಮಾಡಿದ್ದೇನೆ. ಅಣೆಕಟ್ಟೆ ರಾಷ್ಟ್ರೀಯ ಸಂಪತ್ತು ಆಗಿರುವುದರಿಂದ ಕಟ್ಟಡ ಕುಸಿತದ ಫೋಟೊಗಳು ಬಹು ಬೇಗನೆ ಒಬ್ಬರನ್ನು ನೆಚ್ಚಿಸಿಕೊಳ್ಳಲು ಯಾರೋ ಬಹಿರಂಗವಾಗಿ ಲೀಕ್‌ ಮಾಡುತ್ತಿದ್ದಾರೆ. ಈ ಬಗ್ಗೆ ಭದ್ರತಾ ವ್ಯವಸ್ಥೆಯ ಲೋಪವೂ ಇದೆ. ಯಾರೊಬ್ಬರೂ ಕಳಂಕ ತರುವ ಕೆಲಸ ಮಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next