Advertisement

ಕುಕ್ಕೆ ದೇಗುಲದ ಇಒ ಆಗಿ ರವೀಂದ್ರ ಎಂ.ಎಚ್ ನಿಯೋಜನೆ

09:43 AM Nov 13, 2019 | sudhir |

ಸುಬ್ರಹ್ಮಣ್ಯ : ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಕುಕ್ಕೆ ದೇಗುಲದ ಕಾರ್ಯನಿರ್ವಹಣಾಧಿಕಾರಿ ಆಗಿದ್ದು ಇತ್ತೀಚೆಗೆ ಮೈಸೂರು ಜಿಲ್ಲೆಯ ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ವರ್ಗಾವಣೆಗೊಂಡಿದ್ದ ರವೀಂದ್ರ ಎಂ ಎಚ್ ಅವರನ್ನು ಮರಳಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾಗಿ ನಿಯೋಜಿಸಿ ಸರಕಾರ ಮಂಗಳವಾರ ಆದೇಶಿಸಿದೆ. ವರ್ಗಾವಣೆ ಬಳಿಕ ದೇಗುಲದ ಕಾರ್ಯನಿರ್ವಾಹಣಾಧಿಕಾರಿಯಾಗಿ ಪುತ್ತೂರು ಸಹಾಯಕ ಆಯುಕ್ತರು ಅಧಿಕಾರ ವಹಿಸಿಕೊಂಡಿದ್ದರು.

Advertisement

ಅವರಿಗೂ ವರ್ಗಾವಣೆಗೊಂಡು ತೆರಳಿದ ಬಳಿಕ ಪುತ್ತೂರು ತಹಸಿಲ್ದಾರ್ ಅವರು ಅಧಿಕಾರ ವಹಿಸಿಕೊಂಡಿದ್ದರು.ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಸಿದ್ದತೆಗಳು ನಡೆಯಬೇಕಿದ್ದರಿಂದ ಖಾಯಂ ಕಾರ್ಯನಿರ್ವಾಹಣಾಧಿಕಾರಿಗಳು ಇಲ್ಲದೆ ತೊಡಕಾಗಿತ್ತು.ಕುಕ್ಕೆ ದೇಗುಲದಲ್ಲಿ ಅಧಿಕಾರಿಗಳು ಇಲ್ಲದೆ ಅಭಿವ್ರದ್ದಿ ಹಾಗೂ ಕಚೇರಿ ಕಾರ್ಯಗಳಿಗೆ ಸಮಸ್ಯೆಯಾಗುತ್ತಿರುವ ಕುರಿತು ಇತ್ತೀಚೆಗೆ ಉದಯವಾಣಿ ವರದಿ ಪ್ರಕಟಿಸಿತ್ತು.

ಇತ್ತೀಚೆಗೆ ಕುಕ್ಕೆಗೆ ಆಗಮಿಸಿದ ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಶೀಘ್ರ ಇಲ್ಲಿಗೆ ಖಾಯಂ ಆಗಿ ಕಾರ್ಯನಿರ್ವಾಹಣಾಧಿಕಾರಿ ನಿಯೋಜಿಸುವ ಕುರಿತು ಭರವಸೆ ಇತ್ತಿದ್ದರು.ಇದೀಗ ರವೀಂದ್ರ ಎಂ.ಎಚ್ ಅವರನ್ನು ನೇಮಿಸುವ ಮೂಲಕ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಭರ್ತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next