Advertisement

ಗಾಯ: ಸರಣಿಯಿಂದ ಹೊರಬಿದ್ದ ಜಡೇಜ, ಬಚಾವಾದ ಪಂತ್‌

10:24 PM Jan 09, 2021 | Team Udayavani |

ಸಿಡ್ನಿ : ಭಾರತೀಯ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಏರುತ್ತಲೇ ಸಾಗಿದೆ. ಇದಕ್ಕೆ ಹೊಸ ಸೇರ್ಪಡೆ ರಿಷಭ್‌ ಪಂತ್‌ ಹಾಗೂ ರವೀಂದ್ರ ಜಡೇಜ. ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ರವೀಂದ್ರ ಜಡೇಜ ಎಡಗೈ ತೋರು ಬೆರಳಿಗೆ ಹೊಡೆತ  ಬಿದ್ದಿದೆ. ಮೂಳೆಯ ಕೊಂಡಿ ಕಳಚಿದೆ. ಪರಿಣಾಮ ಅವರು ಸರಣಿಯಿಂದ ಹೊರಬಿದ್ದಿದ್ದಾರೆ.

Advertisement

ಜಡೇಜ ಸೀಮಿತ ಓವರ್‌ಗಳ ಪಂದ್ಯದ ವೇಳೆಯೂ ಗಾಯಗೊಂಡು ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಇನ್ನು ರಿಷಭ್‌ ಪಂತ್‌ ಬ್ಯಾಟ್‌ ಮಾಡುವಾಗ ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ತಮ್ಮ ಮೊಳಕೈಗೆ ಬಲವಾದ ಹೊಡೆತ ತಿಂದರು. ಆ ನೋವಿನಲ್ಲೇ ಅವರು ಲಯ ಕಳೆದುಕೊಂಡು ಔಟಾದರು. ಆಶಾದಾಯಕ ಸುದ್ದಿಯೆಂದರೆ ಅವರು ಭಾರತದ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಲು ಬಹುತೇಕ ಲಭ್ಯರಿರುತ್ತಾರೆ. ಸದ್ಯ ಅವರ ಜಾಗದಲ್ಲಿ ವೃದ್ಧಿಮಾನ್‌ ಸಹಾ ಕೀಪಿಂಗ್‌ ಮಾಡುತ್ತಿದ್ದಾರೆ.

ಭಾರತ ಈ ಇಡೀ ಪ್ರವಾಸದಲ್ಲಿ ಗಾಯಾಳುಗಳ ಸಮಸ್ಯೆಗೆ ಸಿಲುಕಿದೆ. ಸರಣಿಗಿಂತ ಮುನ್ನವೇ ರೋಹಿತ್‌ ಶರ್ಮ, ಇಶಾಂತ್‌ ಶರ್ಮ ಗಾಯಕ್ಕೆ ಸಿಲುಕಿದ್ದರು. ಸರಣಿ ಶುರುವಾದ ಮೇಲೆ ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಕೆ.ಎಲ್‌.ರಾಹುಲ್‌ ಗಾಯಾಳಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next