Advertisement

Kannada Cinema; ಬೆಸ್ಟ್‌ ಟೈಲರ್‌ ಗುರುತಿಸಿ!: ‘ರವಿಕೆ ಪ್ರಸಂಗ’ದ ಹೊಸ ಸ್ಪರ್ಧೆ

05:51 PM Feb 11, 2024 | Team Udayavani |

ಸಿನಿಮಾ ಮಂದಿ ತಮ್ಮ ಸಿನಿಮಾ ಬಿಡುಗಡೆ ಸಮಯದಲ್ಲಿ ವಿಭಿನ್ನ ಪ್ರಚಾರ, ಕಾನ್ಸೆಪ್ಟ್ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಅದರಲ್ಲೂ ಸಿನಿಮಾದ ಕಥೆಗೆ ಸಂಬಂಧಿಸಿದ ಅಂಶದೊಂದಿಗೆ ಹೆಚ್ಚು ಗಮನ ಸೆಳೆಯುತ್ತಾರೆ. ಈಗ ಇದೇ ರೀತಿ ಚಿತ್ರತಂಡವೊಂದು ಸ್ಪರ್ಧೆಯೊಂದನ್ನು ಆಯೋಜಿಸಿದೆ. ಅದು “ಕರ್ನಾಟಕ ಬೆಸ್ಟ್‌ ಟೈಲರ್‌ ಗುರುತಿಸುವ ಕಾನ್ಸೆಪ್ಟ್.

Advertisement

ಹೌದು, “ರವಿಕೆ ಪ್ರಸಂಗ’ ಚಿತ್ರ ಫೆ.16ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಈ ಸ್ಪರ್ಧೆಯನ್ನು ಲಾಂಚ್‌ ಮಾಡಿದೆ. ಬೆಸ್ಟ್‌ ಟೈಲರ್‌ ಅನ್ನು ಗುರುತಿಸಿದವರಿಗೆ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.

ವಿಜೇತರಾದವರಿಗೆ, ಹೊಲಿಗೆ ಯಂತ್ರ, ಮೊಬೈಲ್‌ ಫೋನ್‌ ಹಾಗೂ ಸಿನೇಮಾ ಟಿಕೆಟ್‌ ನೀಡಲಾಗುವುದು. ಈ ಕಾನ್ಸೆಪ್ಟ್ಗೆ ಕಾರಣ ಚಿತ್ರದ ಕಥಾಹಂದರ. ಟೈಲರ್‌ ಹಾಗೂ ರವಿಕೆ ಪ್ರಸಂಗ ಈ ಸಿನಿಮಾದ ಹೈಲೈಟ್‌.

ಸಂತೋಷ್‌ ಕೊಡೆಂಕೇರಿ ಈ ಚಿತ್ರದ ನಿರ್ದೇಶಕರು. “ದೃಷ್ಟಿ ಮೀಡಿಯಾ’ ಪ್ರೊಡಕ್ಷನ್ಸ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಗೀತಾ ಭಾರತಿ ಭಟ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ಪಾವನಾ ಸಂತೋಷ್‌ ಕಥೆ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next