Advertisement

ರವಿ-ಉಪ್ಪಿ ಸಿನಿಮಾಕ್ಕೆ ಮುಹೂರ್ತ ಫಿಕ್ಸ್‌

11:06 AM Jul 24, 2018 | |

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಹೊಸ ಸಿನಿಮಾ ಮಾಡುತ್ತಿದ್ದು, ರವಿಚಂದ್ರನ್‌ ಹಾಗೂ ಉಪೇಂದ್ರ ಈ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಕೆಲ ದಿನಗಳಿಂದ ಓಡಾಡುತ್ತಲೇ ಇತ್ತು. ಈಗ ಬಹುತೇಕ ಪಕ್ಕಾ ಎಲ್ಲವೂ ಪಕ್ಕಾ ಆಗಿದೆ. ಆಗಸ್ಟ್‌ 11 ರಂದು ಚಿತ್ರದ ಫೋಟೋಶೂಟ್‌ ನಡೆಯಲಿದ್ದು, 20ಕ್ಕೆ ಚಿತ್ರ ಸೆಟ್ಟೇರಲಿದೆ.

Advertisement

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಹೇಳುವಂತೆ, ಕಥೆ ತುಂಬಾ ವಿಭಿನ್ನವಾಗಿದ್ದು, ಇಬ್ಬರ ಪಾತ್ರಗಳು ಹೊಸತನದಿಂದ ಕೂಡಿದೆಯರಲಿದೆಯಂತೆ. ಜೊತೆಗೆ ಸಿನಿಮಾ ಕೂಡಾ ಅದ್ಧೂರಿಯಾಗಿ ಮೂಡಿಬರಲಿದೆ ಎನ್ನುತ್ತಾರೆ ಓಂ ಪ್ರಕಾಶ್‌ ರಾವ್‌. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಿಮಿಕಾ ರತ್ನಾಕರ್‌ ಈಗಾಗಲೇ ಆಯ್ಕೆಯಾಗಿದ್ದಾರೆ.

ನಿಮಿಕಾ, ಉಪೇಂದ್ರ ಅವರ ಜೋಡಿಯಾಗಿ ನಟಿಸಲಿದ್ದಾರೆ. ಈ ಹಿಂದೆ “ರಾಮಧಾನ್ಯ’ ಚಿತ್ರದಲ್ಲಿ ನಿಮಿಕಾ ನಾಯಕಿಯಾಗಿದ್ದರು. ಈ ಚಿತ್ರವನ್ನು ಆರ್‌.ಎಸ್‌.ಪ್ರೊಡಕ್ಷನ್ಸ್‌ನಡಿ ಕನಕಪುರ ಶ್ರೀನಿವಾಸ್‌ ನಿರ್ಮಿಸುತ್ತಿದ್ದಾರೆ. ಎಲ್ಲಾ ಓಕೆ, ಈ ಚಿತ್ರಕ್ಕೆ ಟೈಟಲ್‌ ಏನಾಗಬಹುದೆಂಬ ಕುತೂಹಲ ಸಹಜವಾಗಿಯೇ ಇದೆ.

ಈ ಬಗ್ಗೆ ಮಾತನಾಡುವ ನಿರ್ಮಾಪಕ ಕನಕಪುರ ಶ್ರೀನಿವಾಸ್‌, “ಚಿತ್ರಕ್ಕೆ ಇನ್ನೂ ಟೈಟಲ್‌ ಅಂತಿಮವಾಗಿಲ್ಲ. “ರವಿ-ಚಂದ್ರ’, “ದಿಲ್‌ ಉಪೇಂದ್ರ’ ಸೇರಿದಂತೆ ಒಂದಷ್ಟು ಟೈಟಲ್‌ ಅಂದುಕೊಂಡಿದ್ದೇವೆ. ಸದ್ಯದಲ್ಲೇ ಒಂದು ಟೈಟಲ್‌ ಫೈನಲ್‌ ಮಾಡುತ್ತೇವೆ’ ಎನ್ನುತ್ತಾರೆ ಶ್ರೀನಿವಾಸ್‌. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ರವಿಕುಮಾರ್‌ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನವಿದ್ದು, ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. 

ನವೆಂಬರ್‌ ಮುಂದುವರೆಯುತ್ತದೆ: ಕನಕಪುರ ಶ್ರೀನಿವಾಸ್‌ ಅವರ ನಿರ್ಮಾಣದಲ್ಲಿ ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ನಾಯಕರಾಗಿ “ನವೆಂಬರ್‌ನಲ್ಲಿ ನಾನು ಅವಳು’ ಚಿತ್ರವನ್ನು ನಿರ್ದೇಶಕ ನಾಗಶೇಖರ್‌ ಆರಂಭಿಸಿದ್ದರು. ಚಿತ್ರದ ಟೀಸರ್‌ ಕೂಡಾ ಬಿಡುಗಡೆಯಾಗಿತ್ತು. ಆದರೆ, ಆ ನಂತರ ಚಿತ್ರ ಮುಂದುವರೆಯಲಿಲ್ಲ.

Advertisement

ಇತ್ತ ಕಡೆ ನಾಗಶೇಖರ್‌ ಅಭಿಷೇಕ್‌ ಅಂಬರೀಶ್‌ ಅವರ “ಅಮರ್‌’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಹಾಗಾದರೆ “ನವೆಂಬರ್‌ನಲ್ಲಿ ನಾನು ಅವಳು’ ಮುಂದುವರೆಯೋದಿಲ್ವಾ, ಚಿತ್ರ ನಿಲ್ಲಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಇದಕ್ಕೆ ಉತ್ತರಿಸುವ ಕನಕಪುರ ಶ್ರೀನಿವಾಸ್‌, “ಖಂಡಿತಾ ಆ ಚಿತ್ರವನ್ನು ಮಾಡಿಯೇ ಮಾಡುತ್ತೇನೆ. ನಿರ್ದೇಶಕರು ನಮಗೆ ಹೇಳಿದ ಕಥೆಗೂ ಅವರು ಮಾಡಿಕೊಂಡು ಕಥೆಗೂ ಒಂದಷ್ಟು ಬದಲಾವಣೆ ಇತ್ತು.

ಹಾಗಾಗಿ, ಆ ಸಿನಿಮಾವನ್ನು ನಿಲ್ಲಿಸಿದ್ದೇನೆ. ದುಡ್ಡು ಹಾಕುವ ನಿರ್ಮಾಪಕನಿಗೆ ಕಥೆ ಇಷ್ಟವಾಗಬೇಕಲ್ಲ ಸ್ವಾಮಿ’ ಎನ್ನುತ್ತಾರೆ ಅವರು. ಈ ನಡುವೆಯೇ ಶ್ರೀನಿವಾಸ್‌ ಅವರು, ಚೇತನ್‌ ಹಾಗೂ ಚಿರಂಜೀವಿ ಸರ್ಜಾ ನಾಯಕರಾಗಿರುವ “ರಣಂ’ ಚಿತ್ರವನ್ನು ಆರಂಭಿಸಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣವಾಗಿದೆಯಂತೆ. ಈ ಚಿತ್ರಕ್ಕೆ ಸ್ಟಾರ್‌ ನಟನೊಬ್ಬ ಗೆಸ್ಟ್‌ ಅಪಿಯರೆನ್ಸ್‌ ಮಾಡಬೇಕಾಗಿದ್ದು, ಆ ಬಗ್ಗೆ ಮಾತುಕತೆ ನಡೆಯುತ್ತಿದೆಯಂತೆ. 

Advertisement

Udayavani is now on Telegram. Click here to join our channel and stay updated with the latest news.

Next