Advertisement

ಶಿರ್ಡಿಗೆ ರವಿಶಾಸ್ತ್ರಿ ಭೇಟಿ

12:23 AM May 23, 2019 | Sriram |

ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

Advertisement

ವಿಶ್ವಕಪ್‌ ಕೂಟದಲ್ಲಿ ಭಾರತದ ಅಭಿಯಾನ ಕಪ್‌ ಗೆಲ್ಲುವ ತನಕ ಯಶಸ್ವಿಯಾಗಿ ನಡೆಯಲಿ, ಯಾವುದೇ ಅಡೆತಡೆ ಎದುರಾಗದಿರಲಿ ಎಂದು ದೇವರಲ್ಲಿ ರವಿಶಾಸ್ತ್ರಿ ಕೇಳಿಕೊಂಡಿದ್ದಾರೆ. ರವಿಶಾಸ್ತ್ರಿ ಜತೆಗೆ ಭಾರತ ತಂಡದ ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌ ಕೂಡ ತೆರಳಿದ್ದರು.
ಈ ಫೋಟೋಗಳನ್ನು ಶ್ರೀಧರ್‌ ತಮ್ಮ ಟ್ವೀಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಟೀಂ ಇಂಡಿಯಾ ಆಟಗಾರರು ಮುಂಬಯಿಯಿಂದ ಇಂಗ್ಲೆಂಡ್‌ಗೆ ಹೊರಡುವ ಮೊದಲು ರವಿಶಾಸ್ತ್ರಿ ಬೆಳಗ್ಗೆ ಬೇಗ ಎದ್ದು ಸಾಯಿಬಾಬಾ ದರ್ಶನಕ್ಕೆ ತೆರಳಿರುವುದು ವಿಶೇಷ.

 

Advertisement

Udayavani is now on Telegram. Click here to join our channel and stay updated with the latest news.

Next