Advertisement

ರವಿಶಾಸ್ತ್ರೀ  ಭೇಟಿ: ದೇವರಿಗೆ ವಿಶೇಷ ಪೂಜೆ, ಪಾರ್ಥನೆ ಸಲ್ಲಿಕೆ 

01:00 PM May 24, 2018 | |

ಪಾವಂಜೆ : ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನಕ್ಕೆ ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌
ರವಿಶಾಸ್ತ್ರಿ ಅವರು ಮೇ 23ರಂದು ವಿಶೇಷ ಭೇಟಿ ನೀಡಿ ವಿವಿಧ ಪೂಜೆಯಲ್ಲಿ ಪಾಲ್ಗೊಂಡರು.

Advertisement

ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷವಾದ ಅರ್ಚನೆ ಮತ್ತು ಪ್ರಾರ್ಥನೆ ನಡೆಸಿದ ರವಿಶಾಸ್ತ್ರಿ ಅನಂತರ ದೇವಸ್ಥಾನದ
ಸಾನ್ನಿಧ್ಯದಲ್ಲಿರುವ ನಾಗ ದೇವರ ಸನ್ನಿಧಾನದಲ್ಲಿ ಪಂಚಾಮೃತ ಅಭಿಷೇಕ ನಡೆಸಿದರು. ಈ ಸಂದರ್ಭದಲ್ಲಿ ದೇಗುಲದ ಅರ್ಚಕರೊಂದಿಗೆ ಹಾಗೂ ತಮ್ಮ ಕ್ರೀಡಾ ಪ್ರೇಮಿಗಳೊಂದಿಗೆ ಮೊಬೈಲ್‌ ಮೂಲಕ ಸೆಲ್ಫಿ ಮತ್ತು ಫೋಟೋಗೆ ಅವಕಾಶ ನೀಡಿದರು. ದೇಗುಲದ ತಂತ್ರಿ ದಿವಾಕರ ಭಟ್‌ ದೇಗುಲದ ವತಿಯಿಂದ ವಿಶೇಷವಾಗಿ ಸಮ್ಮಾನಿಸಿದರು.

ಲಯನ್ಸ್‌ ಕ್ಲಬ್‌ನ ಮಾಜಿ ಜಿಲ್ಲಾ ಗವರ್ನರ್‌ ಡಾ| ಸಂತೋಷ್‌ ಕುಮಾರ್‌ ಶಾಸ್ತ್ರಿ, ಕವಿತಾ ಶಾಸ್ತ್ರಿ, ಉಡುಪಿಯ ಲಾತವ್ಯಾ ಆಚಾರ್ಯ, ವಾದಿರಾಜ ಪೆಜತ್ತಾಯ ಹಾಗೂ ದೇಗುಲದ ಸಿಬಂದಿಗಳು, ಅರ್ಚಕ ವೃಂದದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next