Advertisement

ಕೇರಳದ ನ್ಯಾಯಬೆಲೆ ಅಂಗಡಿಗಳಲ್ಲಿ ಬ್ಯಾಂಕಿಂಗ್‌ ಸೇವೆ

11:49 AM Apr 18, 2022 | Team Udayavani |

ತಿರುವನಂತಪುರ: ಕೇರಳದ ಆಯ್ದ ನ್ಯಾಯಬೆಲೆ ಅಂಗಡಿಗಳಲ್ಲಿ ಮೇ 20ರಿಂದ ಬ್ಯಾಂಕಿಂಗ್‌ ಹಾಗೂ ಇತರ ಸೇವೆಗಳು ಲಭ್ಯವಾಗಲಿವೆ.

Advertisement

ರಾಜ್ಯದಲ್ಲಿ 14 ಸಾವಿರಕ್ಕೂ ಮಿಕ್ಕಿದ ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ ಸರಿಸುಮಾರು 800ರಷ್ಟು ಅಂಗಡಿಗಳಲ್ಲಿ ಹೆಚ್ಚುವರಿ ಸೇವೆ ನೀಡಲು ಮಾಲಕರು ಒಪ್ಪಿ ಕೊಂಡಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್‌. ಅನಿಲ್‌ ಅಧ್ಯಕ್ಷತೆಯಲ್ಲಿ ಈ ವಾರ ಸಭೆ ನಡೆಯಲಿದ್ದು, ಅದರಲ್ಲಿ ಅಂತಿಮ ರೂಪ ಸಿಗಲಿದೆ.

ಬ್ಯಾಂಕಿಂಗ್‌ ಸೇವೆ ನೀಡಲು ನಾಲ್ಕು ಬ್ಯಾಂಕ್‌ ಗಳು ಆಸಕ್ತಿ ತೋರಿಸಿವೆ. ಇಲ್ಲಿ ವಿದ್ಯುತ್‌ ಹಾಗೂ ನೀರಿನ ಬಿಲ್‌ ಸಂಗ್ರಹ, ದಿನಸಿ ವಸ್ತು ಮಾರಾಟದ ಮಾವೇಲಿ ಅಂಗಡಿ ತೆರೆಯುವುದು ಮುಂತಾದ ಯೋಜನೆಗಳಿವೆ. ವರ್ಷಾಂತ್ಯದ ಒಳಗೆ 1,000 ರೇಷನ್‌ ಅಂಗಡಿಗಳಿಗೆ ಈ ಸೇವೆ ವಿಸ್ತರಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next