Advertisement

Scam: ಪಡಿತರ ಹಗರಣ- ಪ.ಬಂಗಾಲ ಸಚಿವ ಸೆರೆ

12:22 AM Oct 28, 2023 | Team Udayavani |

ಕೋಲ್ಕತಾ: ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾವಣೆ ಆರೋಪದ ಮೇರೆಗೆ ಪಶ್ಚಿಮ ಬಂಗಾಲದ ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್‌ ಅವರನ್ನು ಶುಕ್ರವಾರ ಮುಂಜಾನೆ ಬಂಧಿಸಲಾಗಿದೆ. ರಾಜ್ಯ ಅರಣ್ಯ ಸಚಿವರಾದ ಮಲ್ಲಿಕ್‌ ಅವರನ್ನು ಜಾರಿ ನಿರ್ದೇಶನಾಲಯವು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ್ದು, ಅವರನ್ನು 10 ದಿನಗಳ ಕಾಲ ಇ.ಡಿ. ವಶಕ್ಕೊಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

Advertisement

ಹಲವು ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ ಮಲ್ಲಿಕ್‌ ಅವರು ವಿಚಾರಣೆ ವೇಳೆ ಕೋರ್ಟ್‌ ಕೊಠಡಿಯಲ್ಲೇ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಮುನ್ನ, “ನಾನು ವ್ಯವಸ್ಥಿತ ಸಂಚಿನ ಬಲಿ ಪಶು. ಬಿಜೆಪಿ ಮತ್ತು ಸುವೇಂದು ಅಧಿಕಾರಿ ಹೆಣೆದ ಸಂಚಿದು’ ಎಂದು ಅವರು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next