Advertisement

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥೋತ್ಸವ

11:15 PM Jun 11, 2019 | Lakshmi GovindaRaj |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ವಾದೀಂದ್ರ ತೀರ್ಥರ ಆರಾಧನಾ ಮಹೋತ್ಸವ ನಡೆಯಿತು. ತನ್ನಿಮಿತ್ತ ಮಂಗಳವಾರ ಬೆಳಗ್ಗೆ ಮಂತ್ರಾಲಯದ ಶ್ರೀಮಠದ ಪ್ರಾಗಂಣದಲ್ಲಿರುವ ಶ್ರೀ ವಾದೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ಶ್ರೀಮಠ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ಪಂಚಾಮೃತ ಅಭಿಷೇಕ ನೆರವೇರಿಸಿದರು.

Advertisement

ನಂತರ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಶ್ರೀಮಠದ ಪ್ರಾಂಗಣದಲ್ಲಿ ಶ್ರೀ ವಾದೀಂದ್ರ ತೀರ್ಥರ ಬೃಂದಾವನದ ಭಾವಚಿತ್ರವಿಟ್ಟು ಚಿನ್ನದ ರಥೋತ್ಸವ ನಡೆಸಲಾಯಿತು. ಶ್ರೀಮಠದ ಪೀಠಾ ಧಿಪತಿ ಶ್ರೀಸುಬುದೇಂಧ್ರ ತೀರ್ಥರ ಸಾನ್ನಿಧ್ಯದಲ್ಲಿ ಶ್ರೀವಾದಿರಾಜಾಚಾರ್‌, ವಿಷ್ಣುದಾಸ, ನಾಗೇಂದ್ರಾಚಾರ್ಯ ಹಾಗೂ ಶ್ರೀಮಠದ ಇತರ ಪಂಡಿತರಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next