Advertisement

ಕಿಗ್ಗಾ ಋಷ್ಯ ಶೃಂಗಸ್ವಾಮಿ ರಥೋತ್ಸವ

06:17 PM Mar 23, 2021 | Team Udayavani |

ಶೃಂಗೇರಿ: ಮಳೆಯ ದೇವರೆಂದು ಕರೆಯಲ್ಪಡುವ ಕಿಗ್ಗಾದ ಶ್ರೀ ಶಾಂತಾ ಸಮೇತ ಋಷ್ಯಶೃಂಗಸ್ವಾಮಿಯ ರಥೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು. 2020 ನೇ ಸಾಲಿನ ರಥೋತ್ಸವ ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿದ್ದು, ಈ ರಥೋತ್ಸವ ಈಗ ನಡೆದಿದೆ. ಈ ಸಾಲಿನ ರಥೋತ್ಸವವು ಪ್ರತಿ ವರ್ಷದಂತೆ ಏಪ್ರಿಲ್‌ನಲ್ಲಿ ನಡೆಯಲಿದೆ.

Advertisement

ರಥೋತ್ಸವದ ಅಂಗವಾಗಿ ರಥಬೀದಿಯನ್ನು ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ರಥ ಸಾಗುವ ದಾರಿಯನ್ನು ಸ್ವತ್ಛಗೊಳಿಸಿ ರಂಗೋಲಿ ಹಾಕಲಾಗಿತ್ತು. ರಥದ ಎದುರು ವಾದ್ಯಮೇಳ, ಛತ್ರಿ, ಚಾಮರದೊಂದಿಗೆ ರಥವನ್ನು ಎಳೆಯಲಾಯಿತು. ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆ ಸ್ವಾಮಿಯ ಸನ್ನಿಧಿಯಲ್ಲಿ ನಡೆಯಿತು.

ರಥೋತ್ಸವದ ಪೂರ್ವಭಾವಿಯಾಗಿ ಉತ್ಸವ ಮೂರ್ತಿಯನ್ನು ವಾದ್ಯಮೇಳದೊಂದಿಗೆ ದೇಗುಲದಿಂದ ತಂದು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಪುರೋಹಿತರ ವೇದಘೋಷ ನಡೆಯಿತು. ತಹಶೀಲ್ದಾರ್‌ ಅಂಬುಜಾ ರಥದ ಗಾಲಿಗೆ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಕಿಗ್ಗಾ ಹಾಗೂ ಕಸಬಾ ಹೋಬಳಿಯ ರೈತರು ದೇವಸ್ಥಾನಕ್ಕೆ ತೆರಳಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next