Advertisement

Dharmasthala: ಶಿವರಾತ್ರಿ ರಥೋತ್ಸವ ಸಂಪನ್ನ

01:06 AM Mar 10, 2024 | Team Udayavani |

ಬೆಳ್ತಂಗಡಿ: ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಸಂಜೆಯಿಂದ ಅಹೋರಾತ್ರಿ ಜಾಗರಣೆ ನಡೆದು ಶನಿವಾರ ಬೆಳಗ್ಗಿನ ಜಾವ ದೇವರ ರಥೋತ್ಸವ ಜರಗಿತು.

Advertisement

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ದೇವರ ರಥೋತ್ಸವ ಸಡಗರದಿಂದ ನೆರವೇರಿತು.

ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಭಕ್ತರು ರಥೋತ್ಸವ ಪುಣ್ಯ ಕ್ಷಣದಲ್ಲಿ ಪಾಲ್ಗೊಂಡು ಧನ್ಯತೆಯನ್ನು ಹೊಂದಿದರು. ಭಕ್ತರು ಶುಕ್ರವಾರ ಅಹೋರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next