Advertisement

ತುಮಕೂರು ಸಿದ್ದಗಂಗಾ ಮಠದ ರಥಯಾತ್ರೆ ಶನಿವಾರಸಂತೆಗೆ ಆಗಮನ

02:27 PM Mar 09, 2017 | Team Udayavani |

ಶನಿವಾರಸಂತೆ: ಎಪ್ರಿಲ್‌ 1ಕ್ಕೆ ತುಮಕೂರು ಸಿದ್ದಗಂಗಾ ಮಠಾಧೀಶ ಡಾ| ಶಿವಕುಮಾರ ಸ್ವಾಮೀಜಿ ಅವರಿಗೆ 110 ವರ್ಷ ತುಂಬುವ ಹಿನ್ನೆಲೆಯಲ್ಲಿ ಅವರ 110ನೇ ಜನ್ಮದಿನೋತ್ಸವದ ಅಂಗವಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳ ವಿವಿಧ ಭಾವ ಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. 

Advertisement

ಶೋಭಾಯಾತ್ರೆ ಕಾರ್ಯಕ್ರಮ 1 ತಿಂಗಳ ಮುಂಚಿತವಾಗಿ ನಡೆಯಲಿರುವ ಹಿನ್ನೆಲೆ ಯಲ್ಲಿ ಶ್ರೀಗಳ ಭಾವಚಿತ್ರದ ಶೋಭಾಯಾತ್ರೆ ಕಾರ್ಯಕ್ರಮ ತುಮಕೂರು, ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮೂಲಕ ಸಂಚರಿಸಿ ಎ. 1ರಂದು ತುಮಕೂರು ಸೇರಲಿರುವ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅಂದು ಶ್ರೀಗಳ ಜನ್ಮದಿನೋತ್ಸವವನ್ನು ಆಚರಿಸಲಿರುವರು.

ಶೋಭಾಯಾತ್ರೆ ವಾಹನ ಸೋಮವಾರ ಮಧ್ಯಾಹ್ನ ಕೊಡಗು-ಹಾಸನ ಗಡಿ ಭಾಗದಲ್ಲಿರುವ ಶನಿವಾರಸಂತೆಯನ್ನು ಪ್ರವೇಶಿಸಿತು, ಹಾಸನ ಜಿಲ್ಲೆಯ ಯಸಳೂರು ಮೂಲಕವಾಗಿ ಬಂದ ರಥಯಾತ್ರೆ ವಾಹನ ಶನಿವಾರಸಂತೆ ಪಟ್ಟಣ ಪ್ರವೇಶಿಸಿದಂತೆ ಸ್ಥಳೀಯ ಜನರು ವಾದ್ಯಗೋಷ್ಠಿಯೊಂದಿಗೆ ಸ್ವಾಗತಿಸಿದರು. 

ಅನಂತರ ಗುಡುಗಳಲೆ ಜಂಕನ್‌ನಲ್ಲಿ ಶೋಭಾಯಾತ್ರೆ ವಾಹನವನ್ನು ಕೊಡ್ಲಿಪೇಟೆ ಕಲ್ಲುಮಠದ ಮಹಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಹಾಗೂ ವಿವಿಧ ಮಠಗಳ ಮಠಾಧೀಶರು, ವೀರಶೈವ ಸಮಾಜದ ಪ್ರಮುಖರು ಹಾಗೂ ಸಾರ್ವಜನಿಕರು ಸ್ವಾಗತಿಸಿದರು, ಅನಂತರ ಶೋಭಾಯಾತ್ರೆ ವಾಹನ ಕುಶಾಲನಗರ ಕಡೆಗೆ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next