Advertisement

Ratan Tata: ಕಳಚಿದ ಕೈಗಾರಿಕೆ ಕ್ಷೇತ್ರದ ಬೃಹತ್ ಕೊಂಡಿ: ಶಾಸಕ ಮೇಟಿ

10:36 AM Oct 10, 2024 | Team Udayavani |

ಬಾಗಲಕೋಟೆ: ಭಾರತದ ಬೆಳವಣಿಗೆಯ ಇತಿಹಾಸದಲ್ಲಿ ಟಾಟಾ ಸಂಸ್ಥೆಯ ಹೆಸರೂ ಜೊತೆ ಜೊತೆಯಾಗಿ ಬೆಳೆದು ಬಂದಿದೆ. ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಪದ್ಮವಿಭೂಷಣ ರತನ್ ಟಾಟಾ ಅವರ ನಿಧನದಿಂದ ಕೈಗಾರಿಕಾ ಕೈಗಾರಿಕೋಧ್ಯಮ ಕ್ಷೇತ್ರದ ಬಹುದೊಡ್ಡ ಕೊಂಡಿ ಕಳಚಿದಂತಾಗಿದೆ ಎಂದು ಬಿಟಿಡಿಎ ಅಧ್ಯಕ್ಷರೂ ಆಗಿರುವ ಬಾಗಲಕೋಟೆ ಶಾಸಕ‌ ಎಚ್.ವೈ.‌ ಮೇಟಿ ಸಂತಾಪ‌ ಸೂಚಿಸಿದ್ದಾರೆ.

Advertisement

ದೂರದೃಷ್ಟಿಯ ಉದ್ಯಮ ಸಾಮ್ರಾಟ, ಉಪ್ಪಿನಿಂದ ಉಕ್ಕಿನವರೆಗೆ, ಪಿನ್ ನಿಂದ ಪ್ಲೇನ್ ವರೆಗೆ ಅವರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಭಾರತದ ಉದ್ಯಮ ವಲಯವನ್ನು ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದರು ಎಂದು ಹೇಳಿದ್ದಾರೆ.

ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಲೇ ಲಕ್ಷಾಂತರ ಜನರಿಗೆ ಉದ್ಯೋಗ ದಾತರಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next