Advertisement

ರಾಯರ ದರ್ಶನ ಪಡೆದ ಮೋಹನ್‌ ಭಾಗವತ್‌

06:55 AM Sep 01, 2018 | |

ರಾಯಚೂರು: ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಸಮನ್ವಯ ಬೈಠಕ್‌ ನಿಮಿತ್ತ ಮಂತ್ರಾಲಯಕ್ಕೆ ಆಗಮಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಅಧ್ಯಕ್ಷ, ಮೋಹನ್‌ ಭಾಗವತ್‌ ಶುಕ್ರವಾರ ಬೆಳಗ್ಗೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು.

Advertisement

ಗುರುವಾರ ರಾತ್ರಿ ಮಂತ್ರಾಲಯಕ್ಕೆ ಆಗಮಿಸಿದ ಅವರಿಗೆ ಅಲ್ಲಿಯೇ ತಂಗುವ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಮಂಚಾಲಮ್ಮ ದೇವಿ ದರ್ಶನ ಪಡೆದ ನಂತರ, ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅವರನ್ನು ಆಶೀರ್ವದಿಸಿ ಗೌರವಿಸಿದರು.

ಈ ವೇಳೆ, ಉಭಯ ಕುಶಲೋಪರಿ ವಿಚಾರಿಸಿದ ಶ್ರೀಗಳು, ಮಂತ್ರಾಲಯದ ಸ್ಥಾನ ಮಹತ್ವ, ರಾಯರ ಮಹಿಮೆ ಹಾಗೂ ಮಂತ್ರಾಲಯ ಮಠದ ಅಭಿವೃದ್ಧಿ, ದೇಶದಲ್ಲಿರುವ ಮಠದ ಶಾಖಾ ಮಠಗಳ ಕುರಿತು ವಿವರಿಸಿದರು.ಹಿಂದು ಧರ್ಮದ ಪ್ರಗತಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next