Advertisement

ನಾನು ಬಾಲಿವುಡ್‌ ಗೆ ಬರಲು ಇವರೇ ಕಾರಣ: ರಶ್ಮಿಕಾ ಹೇಳಿದ್ದು ಯಾರ ಬಗ್ಗೆ?

04:46 PM Sep 17, 2022 | Team Udayavani |

ಮುಂಬಯಿ: ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿದ್ದಾರೆ. ಟಾಲಿವುಡ್, ಬಾಲಿವುಡ್‌ ನಲ್ಲೂ ಬ್ಯಾಕ್‌ ಟು ಬ್ಯಾಕ್‌ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಭ್‌ ಬಚ್ಚನ್‌ ಅವರೊಂದಿಗೆ ನಟಿಸಿರುವ ʼಗುಡ್‌ ಬೈʼ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ.

Advertisement

ಅಕ್ಟೋಬರ್‌ 7  ರಂದು ರಿಲೀಸ್‌ ಆಗಲಿರುವ ʼಗುಡ್‌ ಬೈʼ ಚಿತ್ರದ ಪ್ರಚಾರಕ್ಕಾಗಿ ದಿಲ್ಲಿಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ನಟಿ ರಶ್ಮಿಕಾ, ಬಾಲಿವುಡ್‌ ಸಿನಿಮಾ ರಂಗಕ್ಕೆ ಬಂದ ಕಾರಣವನ್ನು ಹೇಳಿದ್ದಾರೆ.

ನಾನು ಬಾಲಿವುಡ್‌ ಸಿನಿಮಾದ ಸ್ಕ್ರಿಪ್ಟ್‌ ಗಳನ್ನು ಒಪ್ಪಿಕೊಳ್ಳಲು ಕಾರಣ ಇಲ್ಲಿನ ಪ್ರೇಕ್ಷಕರು. ಪ್ರೇಕ್ಷಕರಿಗೆ ನಾನು ಬಾಲಿವುಡ್‌ ನಲ್ಲಿ ನಟಿಸುವುದು ಇಷ್ಟವಿತ್ತು. ಇಲ್ಲಿ ನಾನು ಸಿನಿಮಾ ಮಾಡಬೇಕೆನ್ನುವ ಆಸೆಯಿತ್ತು. ಅದೇ ಸಮಯದಲ್ಲಿ ʼಪುಷ್ಪʼ ಸಿನಿಮಾ ಬಂತು. ಆ ಸಿನಿಮಾ ನಾನು ಬಾಲಿವುಡ್‌ ಗೆ ಬರಲು ಮತ್ತಷ್ಟು ಧೈರ್ಯ ತುಂಬಿತು. ಆ ಸಿನಿಮಾಕ್ಕೆ ನೀವು ಕೊಟ್ಟ ಪ್ರತಿಕ್ರಿಯೆದಿಂದ ನಾನು ಇವತ್ತು ಇಲ್ಲಿದ್ದೇನೆ ಎಂದರು ನಟಿ.

ವಿಕಾಸ್‌ ಬಹ್ಲ್ ನಿರ್ದೇಶನದ ʼಗುಡ್‌ ಬೈʼ ಸಿನಿಮಾದಲ್ಲಿ ಅಮಿತಾಭ್‌ ಬಚ್ಚನ್‌, ನೀನಾ ಗುಪ್ತಾ, ಪಾವೈಲ್ ಗುಲಾಟಿ, ಸುನಿಲ್ ಗ್ರೋವರ್ ಮುಂತಾದವರು ನಟಿಸುತ್ತಿದ್ದಾರೆ. ರಶ್ಮಿಕಾ ಬಾಲಿವುಡ್‌ ನ ʼಮಿಷನ್‌ ಮಜ್ನುʼ, ʼಅನಿಮಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next