Advertisement

ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿಯಾದ ಯುವಕ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಆರೋಪಿ ಬಂಧನ

11:59 AM Aug 05, 2021 | Team Udayavani |

ಸುರತ್ಕಲ್: ಶಿಕ್ಷಕಿಯೊಬ್ಬರು ಶಾಲೆಗೆ ಬರುತ್ತಿದ್ದ ಸಂದರ್ಭ ಅಪರಿಚಿತ ಯುವಕನೊಬ್ಬ ಸುಮಾರು 2 ಪವನ್ ಚಿನ್ನದ ಕರಿಮಣಿ ಸರ ಸೆಳೆದು ಪರಾರಿಯಾದರೂ ಕ್ಷಿಪ್ರ ಕಾರ್ಯಚರಣೆ ನಡೆಸಿದ ಸುರತ್ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.

Advertisement

ಬಿಸಿಎ ಪದವೀಧರ ಚಿಕ್ಕಮಗಳೂರಿನ ಕೆ.ಎಸ್.ಶ್ರೀಸ್ (24) ಆರೋಪಿಯಾಗಿದ್ದಾನೆ.

ಸುರತ್ಕಲ್ ನ ಶಾಲೆಯ ಶಿಕ್ಷಕಿಯೊಬ್ಬರು   ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಮನೆಯಿಂದ ಶಾಲೆಗೆ ಬರುತ್ತಿದ್ದಾಗ ವಿದ್ಯಾದಾಯಿನಿ ಬಳಿಯ ಅಂಡರ್ ಪಾಸ್ ಬಳಿ ಅಪರಿಚಿತನೊಬ್ಬ ಕರಿಮಣಿ ಸರ ಸೆಳೆದು ಪರಾರಿಯಾಗಿದ್ದ . ಸ್ಥಳೀಯ ಸಿಸಿ ಟಿವಿ ಚಿತ್ರ ಅಧರಿಸಿ ಸಮೀಪದಲ್ಲೇ ಬೈಕ್ ಶೋರೂಂ ಬಳಿ ನಿಂತಿದ್ದ  ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ನೇತೃತ್ವದಲ್ಲಿ ಸುರತ್ಕಲ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next