Advertisement

HKE- HKCCI ಗೆ ದಿಢೀರ್ ಚುನಾವಣೆ: ಮತದಾರರಲ್ಲಿ ಸಂಚಲನ

06:52 PM Jan 17, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ (ಎಚ್  ಕೆಇ) ಸಂಸ್ಥೆ ಹಾಗೂ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ( ಎಚ್ ಕೆಸಿಸಿಐ) ಸಂಸ್ಥೆಗೆ ದೀಢಿರ್ ಚುನಾವಣೆ ನಿಗದಿಯಾಗಿರುವುದು ಮತದಾರರಲ್ಲಿ ತೀವ್ರ ಸಂಚಲನ ಮೂಡಿದೆ.

Advertisement

ಎಚ್  ಕೆಇ ಸಂಸ್ಥೆ ಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾಚ್೯ ಕೊನೆ ವಾರದಲ್ಲೇ ಚುನಾವಣೆ ನಡೆಯುತ್ತದೆ. ಆದರೆ ಈಗ ಬರುವ ಫೆಬ್ರವರಿ 27ರಂದೇ ನಡೆಯುತ್ತಿದೆ. ಅದೇ ರೀತಿ ಕಳೆದ 2020 ರ ಮಾರ್ಚ್ 29 ರಂದು  ನಿಗದಿಯಾಗಿದ್ದ ಚುನಾವಣೆಯು ಕೊವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಚುನಾವಣೆಯು ನಂತರ ಅನೇಕ ಬೆಳವಣಿಗೆಗಳು ನಡೆದು ಕೊನೆಗೆ ನ್ಯಾಯಾಲಯ ಮೆಟ್ಟಿಲೇರಿದ ಮೇಲೆ ಈಗ ಒಮ್ಮೇಲೆ ಚುನಾವಣೆ  ಫೆಬ್ರವರಿ 14 ರಂದು   ನಿಗದಿಯಾಗಿರುವುದು ಸಂಸ್ಥೆ ಸದಸ್ಯರಾಗಿರುವ ವ್ಯಾಪಾರಿಗಳಲ್ಲಿ ಆಶ್ಚರ್ಯ ಹಾಗೂ ಕುತೂಹಲ ಮೂಡಿಸಿದೆ.

ಈ ಎರಡೂ ಸಂಸ್ಥೆಗಳ ಚುನಾವಣೆ ಗೆ ಸ್ಪರ್ಧಿಸುವರು ತಮ್ಮ ಪ್ರತಿಷ್ಠೆ ಪಣಕ್ಕೀಡುವುದರಿಂದ ರಾಜಕೀಯ ಕ್ಷೇತ್ರದ ಚುನಾವಣೆ ಮೀರಿಸುವ ಮಟ್ಟಿಗೆ ತಂತ್ರ-ಪ್ರತಿ ತಂತ್ರ ನಡೆಯುತ್ತಲೇ ಇರುತ್ತವೆ. ಇದೇ ಕಾರಣಕ್ಕೆ ಈ ಎರಡೂ ಸಂಸ್ಥೆಗಳ ಚುನಾವಣೆ ಒಂದು ಮಿನಿ ಚುನಾವಣೆ ಎನ್ನಬಹುದಾಗಿದೆ.

ಇದನ್ನೂ ಓದಿ: ಕರ್ನಾಟಕ ಆಕ್ರಮಿತ ಕೆಲಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ: ಉದ್ಧವ್ ಠಾಕ್ರೆ

ಈ ಸಂಸ್ಥೆಗಳ ಅಧ್ಯಕ್ಷರಾದವರು ಸಾಮಾಜಿಕ, ರಾಜಕೀಯ ಹಾಗೂ ಅಧಿಕಾರಿಯ ಆಡಳಿತ ವಲಯದಲ್ಲಿ ಹೆಸರು ತನ್ನಿಂದ ತಾನೆ ಬರುತ್ತದೆ. ಹೀಗಾಗಿ ಪೈಪೋಟಿ ಹೆಚ್ಚಿದೆ.  ಎಚ್ಕೆಇ ಸಂಸ್ಥೆ ಸಾವಿರಾರು ಕೋಟಿ ರೂ. ಆಸ್ತಿ ಹೊಂದಿದೆ. ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಯಲ್ಲದೇ ರಾಜ್ಯದ ರಾಜಧಾನಿ ಬೆಂಗಳೂರಲ್ಲೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ಸಾವಿರಾರು ನೌಕರರು ಇದ್ದು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರಾದವರು ಹೆಸರಿನ ಜತೆಗೆ ಇತರ ಆರ್ಥಿಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದೇ ಕಾರಣಕ್ಕೆ ದೊಡ್ಡ ಫೈಟ್ ಎಂದು ಪರಿಗಣಿಸಲ್ಪಟ್ಟಿದೆ.. ಇನ್ನೂ ಎಚ್ಕೆಸಿಸಿಐ ಅಧ್ಯಕ್ಷರಾದವರು ಮಾರುಕಟ್ಟೆಯಲ್ಲಿ ಹೆಸರು ಮಾಡುವುದರ ಜತೆಗೆ ಸಾಮಾಜಿಕ, ರಾಜಕೀಯ ಜತೆಗೆ ಔದ್ಯೋಗಿಕವಾಗಿ ಮುನ್ನಡೆ ಸಾಧಿಸಬಹುದಾಗಿದೆ.

Advertisement

ಎಚ್ಕೆಇ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಮತ್ತೊಮ್ಮೆ ತಮ್ಮ ಫೆನಾಲ್ ದೊಂದಿಗೆ ಸ್ಫರ್ಧಿಸಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ. ಅದೇ ರೀತಿ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಹಾಗೂ ವಿಧಾನ ಪರಿಷತ್ ಶಶೀಲ್ ಜಿ.‌ನಮೋಶಿ ಫೆನಾಲ್ ದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿ ಮತದಾರ ಬಳಿ ತೆರಳಲು ಮುಂದಾಗಿದ್ದಾರೆ. ಖ್ಯಾತ ವೈದ್ಯರಾದ ಡಾ. ಶರಣಬಸಪ್ಪ ಕಾಮರಡ್ಡಿ ಸಹ ಅಧ್ಯಕ್ಣ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. 13 ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಒಟ್ಟಾರೆ 50 ಜನರು ಸ್ಪರ್ಧಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು

ಶಾಸಕರ ಸಂಬಂಧಿಕರು, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಚುನಾವಣಾ ಅಖಾಡ ಮತ್ತಷ್ಟು ರಂಗೇರುವಂತೆ ಮಾಡಲಿದೆ.

ಇನ್ನೂ ಎಚ್ಕೆಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಅಮರನಾಥ ಪಾಟೀಲ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆಂಟ (ಸೊಸೆಯ ಸಹೋದರ) ಪ್ರಶಾಂತ ಮಾನಕರ ಸೇರಿದಂತೆ ಮತ್ತಿತರರು ಕಣದಲ್ಲಿ ರುವುದರಿಂದ ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿದೆ.  ಎಚ್ಕೆಇ ಮತದಾರರಲ್ಲಿ ಅರ್ಧದಷ್ಟು ಮತದಾರ ರು ಎಚ್ಕೆಸಿಸಿಐ ಮತದಾರರಾಗಿದ್ದಾರೆ. ಹೀಗಾಗಿ ಈ ಎರಡು ಸಂಸ್ಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ.

ಇದನ್ನೂ ಓದಿ: ದಿ.ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

Advertisement

Udayavani is now on Telegram. Click here to join our channel and stay updated with the latest news.

Next