Advertisement

ಸೊಸೆ ಮೇಲೆ ಮಾವನಿಂದ ಅತ್ಯಾಚಾರ: ಆರೋಪ

03:01 PM Feb 09, 2021 | Team Udayavani |

ಹಾಸನ: ಮಾವನಿಂದ ಅತ್ಯಾಚಾರಕ್ಕೊಳಗಾದ ಸೊಸೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಬೇಲೂರು ತಾಲೂಕಿನ ಹೊಸಹಳ್ಳಿಯ ಲಕ್ಷ್ಮೀ(30) ಎಂಬಾಕೆಯ ಮೇಲೆ ಆಕೆಯ ಮಾವ ವೆಂಕಟೇಶ ಜೋಗಿ ಎಂಬಾತ ಸಂಕ್ರಾಂತಿ ಹಬ್ಬದ ಮುನ್ನಾದಿನ ಅತ್ಯಾಚಾರ ಎಸಗಿದ್ದ ಎನ್ನಲಾಗಿದ್ದು, ಮಾವನ ದುಷ್ಕೃತ್ಯದಿಂದ ಮನನೊಂದ ಲಕ್ಷ್ಮೀ ಸಂಕ್ರಾಂತಿಯ ದಿನ ತವರು ಮನೆಗೆ ಹೊರಟಾಗಲೇ ವಿಷ ಸೇವಿಸಿ ಆಸ್ವಸ್ಥಳಾಗಿದ್ದಳು. ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ, ಚಿಕಿತ್ಸೆ ಫ‌ಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾಳೆ.

ಪ್ರಕರಣದ ವಿವರ: ಮೈಸೂರು ಜಿಲ್ಲೆ, ಕೆ.ಆರ್‌. ನಗರ ತಾಲೂಕಿನ ಕಾಕನಹಳ್ಳಿ ಗ್ರಾಮದ ಲಕ್ಷ್ಮೀ ಯನ್ನು ಬೇಲೂರು ತಾಲೂಕಿನ ಪುಟ್ಟರಾಜು ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಜ. 13 ರಂದು ತನ್ನ ತವರು ಮನೆಗೆ ಹೊರಟಿದ್ದ ಲಕ್ಷ್ಮೀ ಹೊರಟ್ಟಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೆಂಕಟೇಶ ಜೋಗಿ ಲಕ್ಷ್ಮೀ ಯ ಮೇಲೆ ಅತ್ಯಾಚಾರ ಎಸಗಿದ್ದನೆಂದು, ವಿಷಯ ವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡದ್ದನೆನ್ನಲಾಗಿದೆ.ಅತ್ಯಾಚಾರಕ್ಕೊಳಗಾದ ಮರುದಿನ ವಾದ ಸಂಕ್ರಾಂತಿಯ ದಿನ ತನ್ನ ತವರು ಮನೆಗೆ ಹೋಗುವಾಗಲೇ ಲಕ್ಷ್ಮೀ ವಿಷ ಸೇವಿಸಿದ್ದರಿಂದ ಮಾರ್ಗ ಮಧ್ಯೆ ಹೊಳೆನರಸೀಪುರ ಸಮೀಪ ಅಸ್ವಸ್ಥಳಾಗಿದ್ದಳೆಂದು, ಆಕೆಗೆ ಹೊಳೆ ನರಸೀಪುರದ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಆದರೆ, ಆಕೆ ಗುಣಮುಖ ರಾಗದ ಕಾರಣ, ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಲ್ಲಿಯೂ ಚಿಕಿತ್ಸೆ  ಲಕಾರಿಯಾಗದೆ ಲಕ್ಷ್ಮಿ ಮೃತಪಟ್ಟಿದ್ದಾಳೆ.

ಇದನ್ನೂ ಓದಿ :ಸಾಲ ಯೋಜನೆ ಉದ್ಯೋಗಾವಕಾಶಕ್ಕೆ ಉತ್ತಮ ಹೆಜ್ಜೆ

ಮನೆ ಮುಂದೆ ಶವ ಸಂಸ್ಕಾರಕ್ಕೆ ಯತ್ನ: ಲಕ್ಷ್ಮೀಯ ತವರು ಮನೆಯವರು ಸೋಮವಾರ ಹೊಸಹಳ್ಳಿಗೆ ಲಕ್ಷ್ಮೀ ಶವವನ್ನು ತಂದು ಅತ್ಯಾಚಾರ ಎಸಗಿದ್ದಾನೆ  ಎನ್ನಲಾದ ಆಕೆಯ ಮಾವ ವೆಂಕಟೇಶ ಜೋಗಿ ಮನೆ ಮುಂದೆಯೇ ಹೂಳಲು ಯತ್ನಿಸಿದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬೇಲೂರು ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

Advertisement

ಅಂತಿಮವಾಗಿ ವೆಂಕಟೇಶ ಜೋಗಿ ಮನೆ ಹಿಂಭಾ ಗದ ಜಮೀನಿನಲ್ಲಿ ಲಕ್ಷ್ಮೀ ಶವ ಸಂಸ್ಕಾರ ಮಾಡಲಾ ಯಿತು. ಲಕ್ಷ್ಮೀ ತವರು ಮನೆಯವರ ದೂರಿನ ಮೇರೆಗೆ ಪೊಲೀಸರು ವೆಂಕಟೇಶ ಜೋಗಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next